ನಾಗರಹೊಳೆ, ಅ. 1: ಈ ಬಾರಿಯ ದಸರಾ ಜಂಬೂಸವಾರಿ ಯಲ್ಲಿ ಪಾಲ್ಗೊಳ್ಳುವ ಐದು ಆನೆಗಳನ್ನು ನಾಗರಹೊಳೆ ವೀರನಹೊಸಳ್ಳಿ ಗೇಟ್‍ನಲ್ಲಿ ಸಂಪ್ರದಾಯದಂತೆ ಪೂಜೆ ಸಲ್ಲಿಸಿ ಬೀಳ್ಕೊಡಲಾಯಿತು. ಈ ಬಾರಿ ಅಂಬಾರಿ ಹೊರಲಿರುವ ಅಭಿಮನ್ಯು ಸೇರಿದಂತೆ ವಿಕ್ರಮ ಗೋಪಿ, ವಿಜಯ, ಕಾವೇರಿ. ಐದು ಗಜಗಳಿಗೆ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಪೂಜೆ ಸಲ್ಲಿಸಿ ಬರಮಾಡಿಕೊಂಡರು. ಮುಖ್ಯ ಅರಣ್ಯಾಧಿಕಾರಿ ಹೀರಾಲಾಲ್, ಡಿಸಿಎಫ್‍ಗಳಾದ ಮಹೇಶ್, ಅಲೆಕ್ಸಾಂಡರ್ ಸೇರಿದಂತೆ ಇತರ ಅಧಿಕಾರಿಗಳು, ಮಾವುತರು, ಕಾವಾಡಿಗಳು ಹಾಜರಿದ್ದರು.

-ಸುಧೀರ್ ಹೊದ್ದೆಟ್ಟಿ ಎನ್.ಎನ್. ದಿನೇಶ್