ಮಡಿಕೇರಿ, ಸೆ.29: ಭಾಗಮಂಡಲ ಸಮೀಪ ಕುಂದಚೇರಿ ಗ್ರಾಮದ ನಿವಾಸಿ ಅಣ್ಣು ಪೂಜಾರಿ (73) ತಾ. 7ರಂದು ಮನೆಯವರೊಂದಿಗೆ ಜಗಳವಾಡಿ ಮನೆಬಿಟ್ಟು ತೆರಳಿದ್ದು, ಹಿಂತಿರುಗಿಲ್ಲ ಎಂದು ಅವರ ಮಗ ಚಂದ್ರಶೇಖರ ಬಿ.ಎ. ಅವರು ಭಾಗಮಂಡಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ವ್ಯಕ್ತಿ ಪತ್ತೆಯಾದಲ್ಲಿ ದೂ. 08272-220100 ಅಥವಾ 08272-228330ಕ್ಕೆ ಕರೆ ಮಾಡಬೇಕಾಗಿ ಪೊಲೀಸ್ ಪ್ರಕಟಣೆ ತಿಳಿಸಿದೆ.