ನಾಪೆÉÇೀಕ್ಲು, ಸೆ. 28 : ಮಡಿಕೇರಿ ತಾಲೂಕು ಕೃಷಿ ಮೋರ್ಚಾದ ವತಿಯಿಂದ ನಿರಂತರವಾಗಿ ಉಳುಮೆ ಮಾಡಿ ನಾಟಿ ಮಾಡುತ್ತಿರುವ ನಾಪೆÉÇೀಕ್ಲು, ಪಾರಣೆ, ನೆಲಜಿ ವಿಭಾಗದ 9 ಮಂದಿ ಕೃಷಿಕರನ್ನು ಸನ್ಮಾನಿಸಲಾಯಿತು. ಕೃಷಿಕರಾದ ಕುಲ್ಲೇಟಿರ ಮಾದಪ್ಪ. ಬೊಪ್ಪಂಡ ಕಾಶಿ ನಂಜಪ್ಪ, ಶಿವಚಾಳಿಯಂಡ ಸಹದೇವ, ನೂರಂಬಡ ರವೀಂದ್ರ, ಚೋಕಿರ ಗಣೇಶ್, ಪಾಡೇಯಂಡ ಕಟ್ಟಿ, ಮುಕ್ಕಾಟೀರ ಗಿರೀಶ್, ಚೌರೀರ ಉದಯ, ಕುಂಡ್ಯೋಳಂಡ ವಿಜಯ ಅವರುಗಳನ್ನು ಸನ್ಮಾನಿಸಲಾಯಿತು.

ಈ ಸಂದರ್ಭ ರಾಜ್ಯ ರೈತ ಮೋರ್ಚಾದ ಕಾರ್ಯದರ್ಶಿ ಡಾ. ನವೀನ್, ಜಿಲ್ಲಾಧ್ಯಕ್ಷ ನಾಗೇಶ್ ಕುಂದಲ್ಪಾಡಿ, ಮಡಿಕೇರಿ ತಾಲೂಕು ಅಧ್ಯಕ್ಷ ಶಿವಚಾಳಿಯಂಡ ಜಗದೀಶ್, ರಾಜ್ಯ ಬಿ.ಜೆ.ಪಿ. ಮಾಜಿ ಕಾರ್ಯದರ್ಶಿ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ, ಬಿ.ಜೆ.ಪಿ. ಶಕ್ತಿ ಕೇಂದ್ರದ ಅಧ್ಯಕ್ಷ ಶಿವಚಾಳಿಯಂಡ ಅಂಬಿ ಕಾರ್ಯಪ್ಪ, ಜಿಲ್ಲಾ ಪಂಚಾಯತ್ ಸದಸ್ಯ ಮುರುಳೀಧರ್, ತಾಲೂಕು ಪಂಚಾಯತ್ ಅಧ್ಯಕ್ಷೆ ತೆಕ್ಕಡ ಶೋಭಾ ಮೋಹನ್, ಜಿ.ಪಂ. ಸದಸ್ಯೆ ಕಲಾವತಿ, ತಾ.ಪಂ. ಸದಸ್ಯೆ ಉಮಾಪ್ರಭು, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಅರೆಯಡ ಅಶೋಕ, ತಾಲೂಕು ಬಿ.ಜೆ.ಪಿ. ಅಧ್ಯಕ್ಷ ಕಾಂಗೀರ ಸತೀಶ್ ಮತ್ತಿತರರು ಇದ್ದರು.