ಸುಂಟಿಕೊಪ್ಪ, ಸೆ.24: ಇಲ್ಲಿನ ಮಲೆಯಾಳಿ ಸಮಾಜದ ವಾರ್ಷಿಕ ಮಹಾ ಸಭೆಯು ಮಂಜುನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ಸಂಘದ ಅಧ್ಯಕ್ಷ ವಿ.ಎ. ಸಂತೋಷ್ ಅಧ್ಯಕ್ಷತೆಯಲ್ಲಿ ನಡೆಯಿತು.

ಈ ಹಿಂದೆ ಇದ್ದ ಸಮಿತಿಯು ಮುಂದುವರೆಯುವಂತೆ ಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನಿಸಲಾಯಿತು. ನಂತರ ನೂತನ ಅಧ್ಯಕ್ಷÀ ಸಂತೋಷ್ ಸಭೆಯನ್ನು ಉದ್ದೇಶಿಸಿ ಮಾತನಾಡಿ ಸುಂಟಿಕೊಪ್ಪ ಮಲೆಯಾಳಿ ಸಮಾಜದ ಪ್ರತಿಯೊಬ್ಬರೂ ಪ್ರೀತಿ ವಿಶ್ವಾಸದಿಂದ ನಡೆದುಕೊಳ್ಳುವುದರ ಮೂಲಕ ಒಗ್ಗಟಾಗಿ ಸಮಾಜದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳ ಬೇಕಾಗಿದೆ. ಕೊರೊನಾದಿಂದಾಗಿ ಈ ವರ್ಷ ಓಣಂ ಹಬ್ಬ ಆಚರಣೆಗೆ ಅಡ್ಡಿಯಾಗಿದೆ. ಮುಂದಿನ ವರ್ಷ ಆಚರಿಸಲು ಕ್ರಮ ಕೈಗೊಳ್ಳಲಾಗುವುದು, ಸಮಾಜದ ಎಲ್ಲರೂ ಅಂತರ ಕಾಯ್ದುಕೊಂಡು ಮಾಸ್ಕ್ ಧರಿಸುವುದರೊಂದಿಗೆ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು.

ಸಾರ್ವಜನಿಕ ಸೇವೆಗೆ ಮಲೆಯಾಳಿ ಸಮಾಜ ಹೆಚ್ಚಿನ ಕಾಳಜಿ ವಹಿಸಬೇಕಾಗಿದೆ ಎಂದರು. ಸಮಿತಿ ಉಪಾಧ್ಯಕ್ಷರಾಗಿ ರಾಜು, ರಾಮಕೃಷ್ಣ, ಗೌರವ ಅಧ್ಯಕ್ಷರಾಗಿ ಭಾಸ್ಕರನ್, ಪ್ರದಾನ ಕಾರ್ಯದರ್ಶಿಯಾಗಿ ವಿ.ವಿನೋದ್‍ಕುಮಾರ್, ಖಜಾಂಚಿಯಾಗಿ ಕೆ.ಪಿ.ವಿನೋದ್, ಸಂಘಟಣಾ ಕಾರ್ಯದರ್ಶಿಯಾಗಿ ಸತೀಶನ್, ಸಹ ಕಾರ್ಯದರ್ಶಿಯಾಗಿ ಸುಬ್ರಮಣಿ ಸಲಹಾ ಸಮಿತಿ ಸದಸ್ಯರಾಗಿ ಪಿ.ಸಿ.ಮೋಹನ್, ರಮೇಶ್ ಪಿಳ್ಳೆ, ರಂಜಿತ್, ಅನಿಲ್, ಶಿವಮಣಿ, ಅÀನೀಶ್, ವಿನೋದ್ ಇವರನ್ನು ಆಯ್ಕೆ ಮಾಡಲಾಯಿತು. ಸಭೆಯಲ್ಲಿ ಸಂಘದ ಸರ್ವ ಸದಸ್ಯರು ಹಾಜರಿದ್ದರು.