ಮಡಿಕೇರಿ, ಸೆ. 16: ಜೆಸಿಐ ಪೊನ್ನಂಪೇಟೆ ಗೋಲ್ಡನ್ ಸಂಸ್ಥೆ ವತಿಯಿಂದ ನಡೆಯುತ್ತಿರುವ ಜೆಸಿಐ ಸಪ್ತಾಹ ‘ಚೈತನ್ಯ’ ಕಾರ್ಯಕ್ರಮದ 4ನೇ ದಿನವಾದ ಇಂದು ರಕ್ತದಾನ ಕಾರ್ಯಕ್ರಮ ನಡೆಯಿತು.

ಜೆಸಿಐ ಗೋಲ್ಡನ್ ಘಟಕದ ಅಧ್ಯಕ್ಷ ಗಯ ಜೋಯಪ್ಪ, ಸದಸ್ಯರುಗಳಾದ ಸುಜು ಕರುಂಬಯ್ಯ, ಎಂ.ಎಂ. ಅಶೋಕ್, ರಾಜ ಸುಬ್ಬಯ್ಯ ಮತ್ತಿತರರು ಮಡಿಕೇರಿಯ ರಕ್ತನಿಧಿ ಕೇಂದ್ರದಲ್ಲಿ ರಕ್ತದಾನ ಮಾಡಿದರು.

ಪೊನ್ನಂಪೇಟೆಯಲ್ಲಿ ನಡೆಯಬೇಕಾಗಿದ್ದ ಕಾರ್ಯಕ್ರಮವನ್ನು ಕೋವಿಡ್ ಕಾರಣದಿಂದಾಗಿ ಮಡಿಕೇರಿಯಲ್ಲಿ ನಡೆಸಲಾಯಿತು ಎಂದು ಗಯ ಜೋಯಪ್ಪ ತಿಳಿಸಿದರು. ಕಾರ್ಯಕ್ರಮದಲ್ಲಿ ಜೆಸಿ ಪಿ.ಬಿ. ನಟೇಶ್ ಹಾಜರಿದ್ದರು.