ಗೋಣಿಕೊಪ್ಪ ವರದಿ, ಸೆ. 16 : ನಿಟ್ಟೂರು-ಕಾರ್ಮಾಡು ಗ್ರಾಮದಲ್ಲಿ ಕಾಡಾನೆ ದಾಳಿಗೆ ಭತ್ತದ ಬೆಳೆ ನಾಶವಾಗಿರುವುದನ್ನು ಖಂಡಿಸಿ ವೀರಾಜಪೇಟೆ ತಾಲೂಕು ಬಿಜೆಪಿ ಕೃಷಿ ಮೋರ್ಚಾದ ವತಿಯಿಂದ ಬುಧವಾರ ಅರಣ್ಯ ಇಲಾಖೆ ವಿರುದ್ಧ ಗದ್ದೆಯಲ್ಲಿ ಪ್ರತಿಭಟನೆ ನಡೆಸಲಾಯಿತು.
ಪೆÇನ್ನಿಮಾಡ ಕುಶಾಲಪ್ಪ ಅವರಿಗೆ ಸೇರಿದ ಗದ್ದೆಯಲ್ಲಿ ಪ್ರತಿಭಟನೆ ನಡೆಯಿತು. ಸ್ಥಳಕ್ಕೆ ಆಗಮಿಸಿದ ಕಲ್ಲಳ್ಳ ವಲಯ ಅರಣ್ಯ ಅಧಿಕಾರಿ ಗಿರೀಶ್ ಚೌಗುಲೆ ಅವರನ್ನು ತರಾಟೆಗೆ ತೆಗೆದುಕೊಂಡರು. ನಿರಂತರವಾಗಿ ಆನೆಗಳು ಬರುತ್ತಿದ್ದರೂ ನಿಯಂತ್ರಣಕ್ಕೆ ಯೋಜನೆ ರೂಪಿಸಿಲ್ಲ. ಸಿಬ್ಬಂದಿ ನೇಮಿಸಿ ಕ್ರಮಕೈಗೊಂಡಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು. ರೈಲ್ವೆ ಬ್ಯಾರಿಕೆಡ್ ನಿರ್ಮಾಣಕ್ಕೆ ಯೋಜನೆ ರೂಪಿಸುವಂತೆ, ಅಲ್ಲಿವರೆಗೂ ರಾತ್ರಿ ಪಾಳಯದಲ್ಲಿ ಸಿಬ್ಬಂದಿಯನ್ನು ನಿಯೋಜಿಸುವಂತೆ ಒತ್ತಾಯಿಸಿ ಮನವಿ ಸಲ್ಲಿಸಲಾಯಿತು.
ರೈಲ್ವೆ ಬ್ಯಾರಿಕೆಡ್ ನಿರ್ಮಾಣಕ್ಕೆ ಪ್ರಸ್ತಾವನೆ ಕಳುಹಿಸಲಾಗುವುದು. ರಾತ್ರಿ ಪಾಳಯದಲ್ಲಿ ಸಿಬ್ಬಂದಿ ಮೂಲಕ ಆನೆ ನಿಯಂತ್ರಣಕ್ಕೆ ಕ್ರಮಕೈಗೊಳ್ಳಲಾಗುವುದು ಎಂದು ವಲಯ ಅರಣ್ಯ ಅಧಿಕಾರಿ ಗಿರೀಶ್ ಚೌಗುಲೆ ಭರವಸೆ ನೀಡಿದರು.
ಬಿಜೆಪಿ ಕೃಷಿ ಮೋರ್ಚಾ ಅಧ್ಯಕ್ಷ ಕಟ್ಟೇರ ಈಶ್ವರ ತಿಮ್ಮಯ್ಯ, ನಿಟ್ಟೂರು ಬಿಜೆಪಿ ಶಕ್ತಿಕೇಂದ್ರ ಪ್ರಮುಖ ಕಾಟಿಮಾಡ ಶರೀನ್ ಮುತ್ತಣ್ಣ ಇವರುಗಳು ಮಾತನಾಡಿ, ಗ್ರಾಮದಲ್ಲಿ ಒಂದು ದಿನ ನಿಗದಿಪಡಿಸಿ ನಷ್ಟಕ್ಕೆ ಒಳಗಾದವರಿಂದ ಅರ್ಜಿ ಸ್ವೀಕರಿಸಲು ಮುಂದಾಗಬೇಕು. ಪರಿಹಾರ ಸಿಗದ ಈ ಹಿಂದಿನ ರೈತರಿಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭ ತಾಲೂಕು ಕೃಷಿ ಮೋರ್ಚಾ ಸದಸ್ಯ ಕಟ್ಟೇರ ಕವನ್, ಕಾರ್ಮಾಡು ಬಿಜೆಪಿ ಪ್ರಮುಖ ಮುಕ್ಕಟೇರ ಸೋಮಯ್ಯ,, ರೈತಸಂಘದ ಮೇಚಂಡ ಕಿಶಮಾಚಯ್ಯ, ದಿನು ಬೆಳ್ಳಿಯಪ್ಪ ಪ್ರಮುಖರಾದ ಸುದೀಪ್, ಪಿ.P ಕುಶಾಲಪ್ಪ, ಪಿ.ಕೆ. ಶಶಿ, ಕೆ.ಜಿ. ಶಿವಪ್ಪ, ಕೆ.ಯಂ. ಕುಟ್ಟಪ್ಪ ಯಂ.ಪಿ. ರಮೇಶ್ ಅಯ್ಯಪ್ಪ, ಯಂ.ಡಿ. ತಮ್ಮಯ್ಯ, ವಿಕಾಸ್ ಉತ್ತಪ್ಪ ಎ.ಯನ್. ವಿನು ದೇವಯ್ಯ, ಮಂಜುನಾಥ ಕೆ.ಯಂ., ನಿಖಿಲ್ ಯಂ.ಟಿ., ನಂಜಪ್ಪ. ಪಿ.ಯಂ., ರಮೇಶ್.ಪಿ., ಮಂದಣ್ಣ ಮತ್ತಿತರ ಪ್ರಮುಖರು ಇದ್ದರು.