ಮಡಿಕೇರಿ, ಸೆ. 16: ಜಿಲ್ಲೆಯಲ್ಲಿ ಕೋವಿಡ್ ಸಂಬಂಧ ಮತ್ತೊಂದು ಸಾವು ಸಂಭವಿಸಿದ್ದು ಮೃತಪಟ್ಟವರ ಸಂಖ್ಯೆ 29 ಕ್ಕೇರಿದೆ. ಮಡಿಕೇರಿ ತಾಲೂಕು ಹೊದವಾಡ ಗ್ರಾಮದ ನಿವಾಸಿ, 58 ವರ್ಷದ ಪುರುಷರೊಬ್ಬರು ತಾ.14 ರಂದು ಅನಾರೋಗ್ಯ ಸಂಬಂಧ ಮಡಿಕೇರಿಯ ಕೋವಿಡ್ ಆಸ್ಪತ್ರೆಗೆ ಚಿಕಿತ್ಸೆಗೆ ಬಂದಿದ್ದು, ರ್ಯಾಪಿಡ್ ಆ್ಯಂಟಿಜನ್ ಕಿಟ್ ಮೂಲಕ ಕೋವಿಡ್ ಪರೀಕ್ಷೆ ನಡೆಸಲಾಗಿ ಸೋಂಕು ದೃಢಪಟ್ಟಿತ್ತು. ಜಿಲ್ಲಾ ಕೋವಿಡ್ ಆಸ್ಪತ್ರೆಯ ಐ.ಸಿ.ಯು ನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ತಾ.15 ರಂದು ರಾತ್ರಿ 8.50 ಕ್ಕೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಜಿಲ್ಲೆಯಲ್ಲಿ ಹೊಸದಾಗಿ 22 ಕೊರೊನಾ ಪ್ರಕರಣಗಳು ವರದಿಯಾಗಿವೆ. ಇದುವರೆಗೆ 2097 ಪ್ರಕರಣಗಳು ವರದಿಯಾಗಿದ್ದು, 1720 ಮಂದಿ ಗುಣಮುಖರಾಗಿದ್ದಾರೆ. 348 ಸಕ್ರಿಯ ಪ್ರಕರಣಗಳಿವೆ. ಸೋಂಕಿತರ ಪೈಕಿ ಕೋವಿಡ್ ಆಸ್ಪತ್ರೆಯಲ್ಲಿ 95 ಮಂದಿ, ಕೋವಿಡ್ ಕೇರ್ ಸೆಂಟರ್ನಲ್ಲಿ 53 ಮಂದಿ ಹಾಗೂ ಹೋಮ್ ಐಸೋಲೇಷನ್ನಲ್ಲಿ 200 ಮಂದಿ ದಾಖಲಾಗಿದ್ದಾರೆ. ಜಿಲ್ಲೆಯಾದ್ಯಂತ 343 ನಿಯಂತ್ರಿತ ವಲಯಗಳಿವೆ.
ಹೊಸ ಪ್ರಕರಣಗಳ ವಿವರ
ಪಿರಿಯಾಪಟ್ಟಣ ಹಾರನಹಳ್ಳಿಯ 31 ವರ್ಷದ ಪುರುಷ, ಚೇರಂಬಾಣೆಯ ಅರುಣ ಪಿಯು ಕಾಲೇಜು ಸಮೀಪದ 30 ವರ್ಷದ ಪುರುಷ, ಮಡಿಕೇರಿ ತಾಳತ್ತಮನೆಯ ನೇತಾಜಿ ಯುವಕ ಸಂಘ ಸಮೀಪದ 43 ವರ್ಷದ ಪುರುಷ, ನಾಪೆÇೀಕ್ಲು ಬೇತು ಗ್ರಾಮದ ಎಕ್ಸೆಲ್ ಶಾಲೆ ಸಮೀಪದ 31 ವರ್ಷದ ಮಹಿಳೆ, ವೀರಾಜಪೇಟೆ ಮಲ್ಲೇತಿರಿಕ ಬೆಟ್ಟದ ಡೆಂಟಲ್ ಕಾಲೇಜು ಸಮೀಪದ 31 ವರ್ಷದ ಪುರುಷ, ಹಾಸನದ 41 ವರ್ಷದ ಪುರುಷ, ಮಡಿಕೇರಿ ಕಗ್ಗೋಡುವಿನ ಭಗವತಿ ದೇವಾಲಯ ಸಮೀಪದ 38 ವರ್ಷದ ಪುರುಷ, 15 ವರ್ಷದ ಬಾಲಕ ಮತ್ತು 34 ವರ್ಷದ ಮಹಿಳೆ, ಅಮ್ಮತ್ತಿಯ ಪಾಲಿಬೆಟ್ಟ ರಸ್ತೆಯ 68 ವರ್ಷದ ಪುರುಷ, ಕುಶಾಲನಗರ ಬೈಪಾಸ್ ರಸ್ತೆಯ 29 ಮತ್ತು 26 ವರ್ಷದ ಪುರುಷರು, ವೀರಾಜಪೇಟೆ ಭಾನಂಗಳ ಹುಂಡಿ ಬಾಡಗದ 1 ವರ್ಷದ ಬಾಲಕ, 23 ಮತ್ತು 50 ವರ್ಷದ ಮಹಿಳೆಯರು, ಮಡಿಕೇರಿ ಎಪಿಎಂಸಿ ಹಿಂಭಾಗದ 31 ವರ್ಷದ ಪುರುಷ, ವೀರಾಜಪೇಟೆ ವಿಜಯನಗರದ 49 ವರ್ಷದ ಪುರುಷ, ಅಮ್ಮತ್ತಿಯ 26 ಮತ್ತು 22 ವರ್ಷದ ಪುರುಷರು, ಸೋಮವಾರಪೇಟೆ 22 ವರ್ಷದ ಪುರುಷ, ಸೋಮವಾರಪೇಟೆ ಎಂ.ಡಿ ಬ್ಲಾಕಿನ 27 ವರ್ಷದ ಮಹಿಳೆ, ಹಾಸನ ಅರಕಲಗೂಡುವಿನ ಮಸೀದಿ ಬಳಿಯ 70 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.