ಪೆರಾಜೆ, ಸೆ. 1: ಇಲ್ಲಿಯ ಚಿಗುರು ಯುವಕ ಮಂಡಲದ 2020-21ನೇ ಸಾಲಿನ ಅಧ್ಯಕ್ಷರಾಗಿ ಕಿರಣ್ ಕುಂಬಳಚೇರಿ ಹಾಗೂ ಕಾರ್ಯದರ್ಶಿಯಾಗಿ ದಿವಾಕರ ಮಜಿಕೋಡಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಯುವಕ ಮಂಡಲದ ಉಪಾಧ್ಯಕ್ಷರಾಗಿ ಪ್ರವೀಣ ಮಜಿಕೋಡಿ, ಖಜಾಂಚಿಯಾಗಿ ಯತಿಶ್ಯಾಮ್ ಕುಂಬಳಚೇರಿ ಸಂಘದ ಕ್ರೀಡಾ ಅಧ್ಯಕ್ಷರಾಗಿ ನಿತಿನ್ ಮಜಿಕೋಡಿ, ಕಾರ್ಯದರ್ಶಿಯಾಗಿ ತಾರೇಶ್ ಕುಂಬಳಚೇರಿ, ಸಾಂಸ್ಕøತಿಕ ಅಧ್ಯಕ್ಷರಾಗಿ ಮಿಥುನ್ ಮಜಿಕೋಡಿ, ಕಾರ್ಯದರ್ಶಿಯಾಗಿ ಭವಿತ್ ಕುಂಬಳಚೇರಿ, ನಿರ್ದೇಶಕರಾಗಿ ಹರ್ಷಿತ್ ಎಂ.ಎನ್., ರಾಜೇಶ್ ಕೆ.ವಿ., ತೀರ್ಥೇಶ್ ಕೆ.ಕೆ., ಹರ್ಷಿತ್ ಕೆ.ಜೆ., ಹೇಮಕುಮಾರ ಅವಿರೋಧವಾಗಿ ಆಯ್ಕೆಯಾದರು.

ಇತ್ತೀಚೆಗೆ ವೈನಾಟ್ ಕುಲವನ್ ಸಭಾಭವನದಲ್ಲಿ ಯುವಕ ಮಂಡಲದ ಮಾಜಿ ಅಧ್ಯಕ್ಷ ಶೀತಲ್ ಕುಂಬಳಚೇರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಘದ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಕಾರ್ಯಕ್ರಮವು ದೀಪಕ್ ಮಜಿಕೋಡಿಯವರ ಪ್ರಾರ್ಥನೆಯಿಂದ ಪ್ರಾರಂಭಗೊಂಡು, ಸಂಘದ ವಾರ್ಷಿಕ ವರದಿಯನ್ನು ಕಾರ್ಯದರ್ಶಿ ನಿಶಾಂತ್ ಮಜಿಕೋಡಿ ಮತ್ತು ಖಜಾಂಚಿ ಹರ್ಷಿತ್ ಮಜಿಕೋಡಿ ಲೆಕ್ಕಪತ್ರ ಮಂಡಿಸಿದರು. ಈ ಸಂದರ್ಭ ಯುವಕ ಮಂಡಲದ ಪದಾಧಿಕಾರಿಗಳು ಮತ್ತು ಸದಸ್ಯರುಗಳು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ದಿವಾಕರ ಮಜಿಕೋಡಿ ಸ್ವಾಗತಿಸಿ, ಭವಿತ್ ಕುಂಬಳಚೇರಿ ವಂದಿಸಿದರು.