ಗೋಣಿಕೊಪ್ಪ ವರದಿ, ಆ. 31 ; ಕೊಡಗು ಸಿರಿಗನ್ನಡ ವೇದಿಕೆ ಹಾಗೂ ಪೆÇನ್ನಂಪೇಟೆ ತಾಲೂಕು ಸಿರಿಗನ್ನಡ ವೇದಿಕೆಯ ಮಹಿಳಾ ಘಟಕದ ವತಿಯಿಂದ ಶಾಲಾ ಕಾಲೇಜು ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ರಾಜ್ಯ ಮಟ್ಟದ ಆನ್‍ಲೈನ್ ಕವನ ಸ್ಪರ್ಧೆಯಲ್ಲಿ ವಿಜೇತರುಗಳನ್ನು ಪ್ರಕಟಿಸಲಾಯಿತು. ರಾಜ್ಯದ ವಿವಿಧ ಭಾಗಗಳ ವಿದ್ಯಾರ್ಥಿಗಳು ಕವನ ರಚಿಸಿದರು.

ಶಾಲಾ ವಿಭಾಗದಲ್ಲಿ ಬಾಡಗರಕೇರಿ ಗ್ರಾಮದ ಚೋನಿರ ಕೃತಿನ್ ಕುಟ್ಟಪ್ಪ ಪ್ರಥಮ, ಮಂಗಳೂರಿನ ಯಶಸ್ವಿನಿ ದ್ವಿತೀಯ, ಅಮ್ಮತ್ತಿಯ ಬಾದುಮಂಡ ಅಮನ್ ಅಯ್ಯಪ್ಪ ತೃತೀಯ ಸ್ಥಾನ ಪಡೆದುಕೊಂಡರು. ಶನಿವಾರಸಂತೆಯ ಎಂ. ಆರ್. ಬಾಪ್ತಿ, ನಾಪೋಕ್ಲುವಿನ ಪಿ. ಅರ್. ಸುಹಾಸ್, ಸಮಧಾನಕರ ಬಹುಮಾನ ಪಡೆದರು. ಕಾಲೇಜು ವಿಭಾಗದಲ್ಲಿ ಬೆಕ್ಕೆಸೊಡ್ಲೂರು ಗ್ರಾಮದ ಮಲ್ಲಮಾಡ ಪೊನ್ನಣ್ಣ ಪ್ರಥಮ, ಕುಶಾಲನಗರದ ಪ್ರಗತಿ ಕೇಡನ ದ್ವಿತೀಯ, ಧಾರವಾಡದ ಅಕ್ಷತಾ ಶಿ. ಕುಬ್ಯಾಳ ತೃತೀಯ ಸ್ಥಾನ ಪಡೆದರು. ಹರೀಶ್ ಸರಳಾಯ, ಇ. ಸುಲೇಮಾನ್ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿದರು. ಉಳುವಂಗಡ ಅಮಿತ್ ಬೋಪಣ್ಣ ಪ್ರಶಸ್ತಿ ಪತ್ರ ತಯಾರಿಸಿದರು. ಎಲ್ಲ್ಲರಿಗೂ ಆನ್‍ಲೈನ್ ಮೂಲಕ ಪ್ರಮಾಣ ಪತ್ರ ಕಳುಹಿಸಲಾಗಿದೆ ಎಂದು ಪೊನ್ನಂಪೇಟೆ ತಾಲೂಕು ಸಿರಿಗನ್ನಡ ವೇದಿಕೆ ಮಹಿಳಾ ಘಟಕ ಉಳುವಂಗಡ ಕಾವೇರಿ ಉದಯ ತಿಳಿಸಿದ್ದಾರೆ.