ನಾಪೋಕ್ಲು, ಆ. 28: ಸಮೀಪದ ಬಲ್ಲಮಾವಟಿ ಗ್ರಾಮದಲ್ಲಿರುವ ಬಸ್ ತಂಗುದಾಣವೊಂದು ಶಿಥಿಲಗೊಂಡಿದೆ. ಇದಕ್ಕೆ ಒದಗಿಸಿರುವ ಮರದ ಆಧಾರವು ಹಾಳಾಗಿದ್ದು, ಕುಸಿದು ಬೀಳುವ ಸ್ಥಿತಿಯಲ್ಲಿದೆ. ಸಂಬಂಧಿಸಿದವರು ಇದರ ದುರಸ್ತಿ ಮಾಡಲು ಗಮನ ಹರಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.