ಸೋಮವಾರಪೇಟೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಪ್ರಗತಿ ಬಂಧು ಹಾಗೂ ಸ್ವಸಹಾಯ ಸಂಘಗಳು, ಸ್ವಯಂಸೇವಾ ಸಂಸ್ಥೆಗಳ ಸಹಯೋಗದೊಂದಿಗೆ ಶ್ರದ್ಧಾ ಕೇಂದ್ರಗಳ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.

ಅಮ್ಮತ್ತಿ: 74ನೇ ಸ್ವಾತಂತ್ರ್ಯ ದಿನದ ಅಂಗವಾಗಿ ಎಸ್ಸೆಸ್ಸೆಫ್ ಕೊಂಡಂಗೇರಿ ಶಾಖೆಯ ವತಿಯಿಂದ ಕೊಂಡಂಗೇರಿ ಉಸ್ಮಾನುಭಿನು ಅಫ್ಫಾನ್ ಮಸೀದಿಯ ಆವರಣದಲ್ಲಿ “ಸ್ವಸ್ಥತೆಗಾಗಿ ಸ್ವಚ್ಛತೆ” ಕಾರ್ಯಕ್ರಮವನ್ನು ಅಶ್ರಫ್ ಅಹ್ಸನಿ ಕೊಂಡಂಗೇರಿ ಅವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.

ಸುನ್ನೀ ಮುಸ್ಲಿಂ ಜಮಾಅತ್ ಅಧ್ಯಕ್ಷ ಯೂಸುಫ್ ಹಾಜಿ ಧ್ವಜಾರೋಹಣ ನೆರವೇರಿಸಿದರು. ಬಳಿಕ ಕೊಂಡಂಗೇರಿ ಗ್ರಾಮದ ರಸ್ತೆ-ಬೀದಿಗಳನ್ನು ಸ್ವಚ್ಛಗೊಳಿಸಲಾಯಿತು.