ಮಡಿಕೇರಿ, ಆ. 26: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ಕೊಡಗು ಜಿಲ್ಲಾ ತುಳುವೆರ ಜನಪದ ಕೂಟದ ಸಹಯೋಗದಲ್ಲಿ ಕೊಡಗು ಜಿಲ್ಲೆಯ ತುಳು ಭಾಷಿಕರಿಗೆ “ತುಳು ಕವಿತೆ” “ತುಳು ಗಾದೆ” ಮತ್ತು ತುಳು ಎದುರು ಕಥೆ” ಸ್ಪರ್ಧೆಯನ್ನು ಆಯೋಜಿಸಿದೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯ ಪಿ.ಎಂ. ರವಿ ತಿಳಿಸಿದ್ದಾರೆ.
ತುಳು ಗಾದೆ, ಕವಿತೆ, ಎದುರು ಕತೆ ಸ್ಪರ್ಧೆಗೆ ಪ್ರಥಮ ಮತ್ತು ದ್ವಿತೀಯ ಬಹುಮಾನ ನಗದು, ನೆನಪಿನ ಕಾಣಿಕೆ ಹಾಗೂ ಪ್ರಶಸ್ತಿ ಪತ್ರ ಒಳಗೊಂಡಿರುತ್ತದೆ.
ತುಳು ಗಾದೆ, ಕವಿತೆ, ಎದುರು ಕಥೆ ಶುದ್ದ ತುಳು ಭಾಷೆಯದ್ದಾಗಿರಬೇಕು. ಈ ಮೊದಲು ಎಲ್ಲಿಯೂ ಪ್ರಕಟವಾಗಿರಬಾರದು. ಗಾದೆ ಸ್ಪರ್ಧೆಗೆ ಅತಿ ಹೆಚ್ಚು ಗಾದೆ ಕಳುಹಿಸಿದವರನ್ನು ಆಯ್ಕೆ ಮಾಡಲಾಗುವುದು. ತುಳು ಎದುರು ಕಥೆಗೆ ಉತ್ತರ ನೀಡುವವರಿಗೆ 20 ಪ್ರಶ್ನೆಗಳಿದ್ದು, ಪ್ರಶ್ನೆಯನ್ನು ವಾಟ್ಸ್ಪ್ ಮೂಲಕ ಕಳುಹಿಸಿ ಕೊಡಲಾಗುವುದು.
ಹೆಸರು ನೋಂದಾಯಿಸಿಕೊಳ್ಳಲು ತಾ. 31 ಕೊನೆಯ ದಿನವಾಗಿದ್ದು, ಸ್ಪರ್ಧಿಗಳು ವಾಟ್ಸಪ್ ನಂ. 9972073295 ಕ್ಕೆ ತಮ್ಮ ಪೂರ್ಣ ವಿಳಾಸ ಮತ್ತು ದೂರವಾಣಿ ಸಂಖ್ಯೆಯನ್ನು ಕಳುಹಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದೆ.