ಶನಿವಾರಸಂತೆ, ಆ. 25: ಕೋವಿಡ್-19 ಹಿನ್ನೆಲೆ ಜಿಲ್ಲಾಧಿಕಾರಿಗಳ ಆದೇಶದಂತೆ ಶನಿವಾರ ನಡೆಯಬೇಕಿದ್ದ ಸಂತೆ ರದ್ದಾಗಿದೆ. ಪ್ರತಿ ಶನಿವಾರ ಗುಂಡೂರಾವ್ ಬಡಾವಣೆಯ ಸಮೀಪ ಸಂತೆ ಮಾರುಕಟ್ಟೆಯಲ್ಲಿ ನಡೆಯುವ ಸಂತೆ ರದ್ದು ಮಾಡಲಾಗಿದೆ.

ಆದ್ದರಿಂದ ಸಂತೆ ವ್ಯಾಪಾರಕ್ಕೆಂದು ಬಂದ ಮಲ್ಲಿಪಟ್ಟಣ, ಅರಕಲಗೂಡು ಹಾಗೂ ಸ್ಥಳೀಯ ವ್ಯಾಪಾರಿಗಳು ಸಂತೆ ಮಾರುಕಟ್ಟೆಯ ಹೊರಭಾಗದ ಬೈಪಾಸ್ ರಸ್ತೆಯ ಎರಡೂ ಬದಿಯಲ್ಲಿ ತರಕಾರಿ ಅಂಗಡಿಗಳು, ಪ್ಲಾಸ್ಟಿಕ್ ಅಂಗಡಿ, ಹಣ್ಣಿನ ಅಂಗಡಿ, ತೆಂಗಿನಕಾಯಿ ಅಂಗಡಿ, ಒಣಮೀನಿನ ಅಂಗಡಿಗಳನ್ನು ಹಾಕಿಕೊಂಡು ವ್ಯಾಪಾರ ಮಾಡುತ್ತಿದ್ದರು.

ತಾ.22ರಂದು ರಜೆಯ ದಿನ ಸಂತೆ ಮಾರುಕಟ್ಟೆಯ ಹೊರಭಾಗದಲ್ಲಿ ರಸ್ತೆಯ ಎರಡೂ ಬದಿಯಲ್ಲಿ ಅಂತರ ಕಾಪಾಡಿಕೊಳ್ಳದೆ ಸಂತೆ ನಡೆಯುತ್ತಿದೆ. ಇದರ ಬದಲು ವಿಸ್ತಾರವಾದ ಸಂತೆ ಮಾರುಕಟ್ಟೆಯೊಳಗಡೆಯಲ್ಲೇ ಸಂತೆ ನಡೆಸಲು ಅನುವು ಮಾಡಿಕೊಡಬಹುದಿತ್ತು ಎಂದು ಕೆಲವು ನಾಗರಿಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.