ಕರಿಕೆ, ಆ. 25: ಇಲ್ಲಿಗೆ ಸಮೀಪದ ಎಳ್ಳುಕೊಚ್ಚಿ ನಿವಾಸಿ ಹೇಮಗಿರಿ ಎಂಬವರ ಜಮೀನಿನಲ್ಲಿ ಸುಮಾರು ಮೂವತ್ತೆರಡು ಕೆ.ಜಿ. ತೂಕದ ಹೆಬ್ಬಾವೊಂದು ಪತ್ತೆಯಾಗಿದ್ದು, ಅದನ್ನು ಸೆರೆಹಿಡಿದು ಪಟ್ಟಿಘಾಟ್ ಮೀಸಲು ಅರಣ್ಯಕ್ಕೆ ಬಿಡಲಾಯಿತು. ಕರಿಕೆ ಉಪ ವಲಯದ ಉಪ ವಲಯ ಅರಣ್ಯಾಧಿಕಾರಿ ಸಚಿನ್ ಬಿರಾದಾರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಅರಣ್ಯ ರಕ್ಷಕ ಸದಾನಂದ, ವೀಕ್ಷಕರಾದ ಚಂದ್ರು, ಪ್ರವೀಣ ಪಾಲ್ಗೊಂಡಿದ್ದರು. -ಸುಧೀರ್