ಸುಂಟಿಕೊಪ್ಪ, ಆ. 19: ಶ್ರೀ ಗೌರಿ-ಶ್ರೀಗಣೇಶೋತ್ಸವ ಆಚರಣಾ ಸಮಿತಿ ಅಧ್ಯಕ್ಷರಾಗಿ 3ನೇ ಬಾರಿಗೆ ಬಿ.ಎಂ. ಸುರೇಶ್, ಪ್ರಧಾನ ಕಾರ್ಯದರ್ಶಿಯಾಗಿ ಸುರೇಶ್ ಗೋಪಿ ಆಯ್ಕೆಯಾಗಿದ್ದಾರೆ. ಸುಂಟಿಕೊಪ್ಪದ ಶ್ರೀ ಕೋದಂಡ ರಾಮಚಂದ್ರ ದೇವಾಲಯದಲ್ಲಿ ವಾರ್ಷಿಕ ಮಹಾಸಭೆಯು ಅಧ್ಯಕ್ಷ ಬಿ.ಎಂ. ಸುರೇಶ್ ಅಧ್ಯಕ್ಷತೆಯಲ್ಲಿ ನಡೆಯಿತು. ನೂತನ ಸಾಲಿನ ಉಪಾಧ್ಯಕ್ಷರುಗಳಾಗಿ ಎಂ.ಆರ್. ಶಶಿಕುಮಾರ್, ಎಸ್. ರವಿ, ಡಿ.ಎಂ. ಲಕ್ಷ್ಮಣ, ಪಿ. ಲೋಕೇಶ್, ಡಿ.ಕೆ. ರಜನೀಶ್, ಸಹ ಕಾರ್ಯದರ್ಶಿಗಳಾಗಿ ಬಿ.ವಿ. ತೇಜಸ್, ಎಸ್. ಪೃಥ್ವಿರಾಜ್, ಸಂಘಟನಾ ಕಾರ್ಯದರ್ಶಿಯಾಗಿ ಕೆ. ಪ್ರಕಾಶ್, ಯು.ಎನ್. ರಮೇಶ್, ಸೂರ್ಯ, ಅರುಣ್ ಕುಮಾರ್, ಕೆ. ಮಧು, ಮಿಥುನ್, ಖಜಾಂಚಿಯಾಗಿ ಡಿ.ಕೆ. ರಾಖೇಶ್ ಕಾರ್ಯಕಾರಿ ಸಮಿತಿಗೆ 41 ಮಂದಿಯನ್ನು ನೇಮಕಗೊಳಿಸಲಾಯಿತು.