ಮಡಿಕೇರಿ, ಆ. 4: ಕೋವಿಡ್-19 ಹಿನ್ನೆಲೆ 18 ರಿಂದ 65 ವರ್ಷದೊಳಗಿನ ಸವಿತಾ ಸಮಾಜದ ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್ ಪಡಿತರ ಚೀಟಿ ಹೊಂದಿರುವ) ಅಸಂಘಟಿತ ವಲಯದ ಕಾರ್ಮಿಕರಿಗೆ ಪರಿಹಾರವಾಗಿ 5 ಸಾವಿರ ರೂ.ಗಳನ್ನು ಪಡೆಯಲು ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿತ್ತು.

ಅರ್ಜಿ ಸಲ್ಲಿಸಲು ಜುಲೈ 25 ಅಂತಿಮ ದಿನವೆಂದು ನಿಗದಿಪಡಿಸಲಾಗಿತ್ತು. ಇದೀಗ ಅರ್ಜಿ ಸಲ್ಲಿಸಲು ತಾ. 15 ರವರೆಗೆ ಮತ್ತೊಮ್ಮೆ ಸರ್ಕಾರವು ಕಾಲಾವಕಾಶ ನಿಗದಿಪಡಿಸಿ ವಿಸ್ತರಿಸಿದೆ ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿ ಅನಿಲ್ ಬಗಟಿ ತಿಳಿಸಿದ್ದಾರೆ.