ಕುಶಾಲನಗರ, ಆ. 2: ಕೋವಿಡ್ -19ರ ಹಿನ್ನೆಲೆ ಭೌತಿಕವಾಗಿ ಶಾಲೆಗಳು ಆರಂಭಗೊಳ್ಳುವವರೆಗೆ ಮಕ್ಕಳು ನಿರಂತರವಾಗಿ ಶಾಲೆಯೊಂದಿಗೆ ಸಂಪರ್ಕ ಹೊಂದಿರಲು ರಾಜ್ಯ ಸರ್ಕಾರ ಆರಂಭಿಸಿರುವ ಮಹತ್ವಾಕಾಂಕ್ಷೆಯ ‘ವಿದ್ಯಾಗಮ’ ನಿರಂತರ ಕಲಿಕಾ ಕಾರ್ಯಕ್ರಮವನ್ನು ಅನುಷ್ಠಾನ ಗೊಳಿಸಲು ಶಿಕ್ಷಕರು ಶ್ರಮಿಸಬೇಕು ಎಂದು ಸೋಮವಾರಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್.ಕೆ. ಪಾಂಡು ಕರೆ ನೀಡಿದರು.
ಇಲ್ಲಿನ ಸರ್ಕಾರಿ ಪದವಿ ಪೂರ್ವಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ತಾಲೂಕು ಪ್ರೌಢಶಾಲಾ ಮುಖ್ಯ ಶಿಕ್ಷಕರಿಗೆ ‘ವಿದ್ಯಾಗಮ’ ನಿರಂತರ ಕಲಿಕಾ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುವ ಕುರಿತು ಏರ್ಪಡಿಸಿದ್ದ ಮಾಹಿತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಕಾಲ್ಪನಿಕ ಕೊಠಡಿ: ತನ್ನ ಶಾಲೆಗಳಲ್ಲಿನ ಮಕ್ಕಳು ಅವರ ವಾಸ ಸ್ಥಳಕ್ಕೆ ಅನುಗುಣವಾಗಿ 3 ಭಾಗಗಳಾಗಿ 1-5ನೇ ತರಗತಿ, 6-8ನೇ ತರಗತಿ ಹಾಗೂ 8-10ನೇ ತರಗತಿಗಳನ್ನು ಗುಂಪುಗಳ ಮೂಲಕ ಕಾಲ್ಪನಿಕ ಕೊಠಡಿಗಳಾಗಿ ರೂಪಿಸಿಕೊಂಡು ಮಾರ್ಗದರ್ಶಿ ಶಿಕ್ಷಕರು ಆಯಾ ಗುಂಪುಗಳಿಗೆ ಇಲಾಖೆ ನಿಗದಿಪಡಿಸಿದ ಪಠ್ಯಪುಸ್ತಕಗಳನ್ನು ಮಕ್ಕಳಿಗೆ ಮಾರ್ಗದರ್ಶನ ನೀಡಲು ಕ್ರಮಕೈಗೊಳ್ಳಬೇಕು ಎಂದರು.
ವಿದ್ಯಾಗಮ ನಿರಂತರ ಕಲಿಕಾ ಕಾರ್ಯಕ್ರಮದ ಅನುಷ್ಠಾನಕ್ಕೆ ಶಾಲಾ ಆಡಳಿತ ಮಂಡಳಿ, ಎಸ್.ಡಿ.ಎಂ.ಸಿ., ಹಳೇ ವಿದ್ಯಾರ್ಥಿಗಳು, ಪೆÇೀಷಕರು ಹಾಗೂ ಸ್ಥಳೀಯ ಸಮುದಾಯವನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಶಾಲೆಯಲ್ಲಿ ಪೂರ್ವಭಾವಿ ಸಭೆಯನ್ನು ಏರ್ಪಡಿಸುವ ಮೂಲಕ ಕಾರ್ಯಕ್ರಮದ ಬಗ್ಗೆ ಪೆÇೀಷಕರಿಗೆ ಮನವರಿಕೆ ಮಾಡಿಕೊಡಬೇಕು ಎಂದರು.
ಈ ಸಂದರ್ಭ ಕಾಲೇಜಿನ ಉಪ ಪ್ರಾಂಶುಪಾಲೆ ಬಿ.ಬಿ. ಸಾವಿತ್ರಿ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಡಿ.ಪಿ. ಧರ್ಮಪ್ಪ, ಬಿ.ಆರ್.ಸಿ. ಶಶಿಧರ್, ಇಸಿಓಗಳಾದ ಕೆ.ಬಿ. ರಾಧಾಕೃಷ್ಣ, ಎಸ್.ಆರ್. ಶಿವಲಿಂಗ, ಬಿ.ಆರ್.ಪಿ.ಗಳಾದ ಎಸ್.ಎನ್. ಲೋಕೇಶ್, ವಿಜಯ್ಕುಮಾರ್, ಮಮತ, ಸಿ.ಆರ್.ಪಿ.ಗಳಾದ ಸಂತೋಷ್ಕುಮಾರ್, ಬಿ.ಎನ್. ವಸಂತಕುಮಾರ್, ಚಿಣ್ಣಪ್ಪ, ಗಿರೀಶ್, ಮನೋಹರ್, ಸೀಮಾ ಇತರರು ಇದ್ದರು.
ಕಾರ್ಯಕ್ರಮದಲ್ಲಿ ಚಿತ್ರಕಲಾ ಶಿಕ್ಷಕ ಉ.ರಾ. ನಾಗೇಶ್ ನಿರ್ವಹಿಸಿದರು. ಆಲೂರು-ಸಿದ್ದಾಪುರ ಪ್ರೌಢಶಾಲಾ ಪ್ರಭಾರಿ ಮುಖ್ಯ ಶಿಕ್ಷಕಿ ಶೃತಿ ಪ್ರಾರ್ಥಿಸಿದರು.