ಮಡಿಕೇರಿ, ಜು. 23: ಅಯೋಧ್ಯೆಯಲ್ಲಿ ಆಗಸ್ಟ್ 5 ರಂದು ನಡೆಯಲಿರುವ ಭವ್ಯ ಶ್ರೀ ರಾಮ ಮಂದಿರದ ಭೂಮಿ ಪೂಜನಾ ಸಮಾರಂಭ ಹಾಗೂ ಶಿಲಾನ್ಯಾಸದ ಸಲುವಾಗಿ ದೇಶ ವ್ಯಾಪಿ ಪುಣ್ಯ ಕ್ಷೇತ್ರಗಳ ತೀರ್ಥ ಹಾಗೂ ಪವಿತ್ರ ಮಣ್ಣನ್ನು (ಮೃತ್ತಿಕೆ) ಅಯೋಧ್ಯೆಗೆ ಕಳುಹಿಸಿ ಕೊಡಲಾಗುತ್ತಿದೆ. ಈ ಸಲುವಾಗಿ ಇಂದು ಕೊಡಗಿನ ತಲಕಾವೇರಿಯಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಪುಣ್ಯ ಕ್ಷೇತ್ರದ ಮಣ್ಣು ಹಾಗೂ ಕಾವೇರಿ ತೀರ್ಥವನ್ನು ಸನ್ನಿಧಿಯಲ್ಲಿ ಸಾಮೂಹಿಕ ಪ್ರಾರ್ಥನೆಯೊಂದಿಗೆ ಅಂಚೆ ಮೂಲಕ ಕಳುಹಿಸಿ ಕೊಡಲಾಯಿತು. ಅಯೋಧ್ಯೆಯ ಶ್ರೀ ರಾಮ ಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿಗಳಾದ ಚಂಪತ್ ರಾಯ್ ಅವರ ವಿಳಾಸಕ್ಕೆ ಕಾವೇರಿ ತೀರ್ಥ ಮತ್ತು ಮೃತ್ತಿಕೆಯೊಂದಿಗೆ ಇರ್ಪು ರಾಮೇಶ್ವರ ಕ್ಷೇತ್ರದ ಪವಿತ್ರ ತೀರ್ಥ ಹಾಗೂ ಮೃತ್ತಿಕೆಯನ್ನು ಪೂಜಿಸಿ ಕಳುಹಿಸಿ ಕೊಡಲಾಯಿತು. ತಲಕಾವೇರಿಯ ಹಿರಿಯ ಅರ್ಚಕರು ಹಾಗೂ ಅಯೋಧ್ಯೆಯ ಕಾರಸೇವಕರಾಗಿದ್ದ (ಮೊದಲ ಪುಟದಿಂದ) ಟಿ.ಎಸ್. ನಾರಾಯಣಾಚಾರ್ ಅವರ ನೇತೃತ್ವದಲ್ಲಿ ವಿಧಾನ ಪರಿಷತ್ ಸದಸ್ಯ ಎಂ. ಪಿ. ಸುನಿಲ್ ಸುಬ್ರಮಣಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜಿಲ್ಲಾ ಸಂಘಚಾಲಕ ಚಕ್ಕೇರ ಮನು ಕಾವೇರಪ್ಪ ವಿಶ್ವ ಹಿಂದೂ ಪರಿಷದ್‍ನ ಜಿಲ್ಲಾ ಮಠ ಮಂದಿರ ಪ್ರಮುಖ ಚಿ. ನಾ. ಸೋಮೇಶ್ ನೇತೃತ್ವದಲ್ಲಿ ಪ್ರಾರ್ಥನೆ ನೆರವೇರಿತು. ಅರ್ಚಕ ಪ್ರಶಾಂತ್ ಆಚಾರ್ ಹಾಗೂ ನಿವೃತ್ತ ಕಾರ್ಯ ನಿರ್ವಹಣಾಧಿಕಾರಿ ಸಂಪತ್ ಕುಮಾರ್ ಪೂಜಾ ವಿಧಿಗಳನ್ನು ಸನ್ನಿಧಿ ಅರ್ಚಕರೊಂದಿಗೆ ನೆರವೇರಿಸಿದರು.

ಕೊಡಗು ಜಿಲ್ಲಾ ಬಜರಂಗದಳ ಸಂಯೋಜಕ ಚೇತನ್ ಕೆ.ಹೆಚ್. ವಿಶ್ವಹಿಂದು ಪರಿಷದ್‍ನ ತಾಲೂಕು ಅಧ್ಯಕ್ಷ ಸುರೇಶ್ ಮುತ್ತಪ್ಪ, ವಿಶ್ವಹಿಂದೂ ಪರಿಷತ್‍ನ ಜಿಲ್ಲಾ ಕಾರ್ಯದರ್ಶಿ ಪುದಿಯೊಕ್ಕಡ ರಮೇಶ್ , ಬಜರಂಗದಳದ ಜಿಲ್ಲಾ ವಿದ್ಯಾರ್ಥಿ ಪ್ರಮುಖ ವಿನಯ್ ಕುಮಾರ್, ಜಿಲ್ಲಾ ಅಖಾಡ ಪ್ರಮುಖ ನಾಗೇಶ್, ಕುಶಾಲನಗರ ಪ್ರಖಂಡ ಸಂಯೋಜಕ ರಾಜೀವ್, ಮಡಿಕೇರಿ ನಗರ ಸಹ ಸಂಯೋಜಕ ಚರಣ್, ಸತ್ಯ, ರವಿ. ನಗರ ಸಭೆ ಮಾಜಿ ಅಧ್ಯಕ್ಷ ಪಿ. ಡಿ. ಪೆÇನ್ನಪ್ಪ, ಪಾರುಪತ್ತೆದಾರ ಪೆÇನ್ನಣ್ಣ ಸೇರಿದಂತೆ ಇತರರು ಪೂಜೆ ಹಾಗೂ ಪ್ರಾರ್ಥನೆಯಲ್ಲಿ ಭಾಗವಹಿಸಿದ್ದರು. ರಾ. ಸ್ವ. ಸಂಘ ಸಂಘಚಾಲಕರು, ಮೇಲ್ಮನೆ ಸದಸ್ಯರು ಹಾಗೂ ಹಿಂದೂ ಸಂಘಟನೆಗಳ ಪ್ರಮುಖರು ಈ ಸಂದರ್ಭ ಮಾತನಾಡುತ್ತಾ ಭಾರತದ ಮಾನ ಸಮ್ಮಾನದ ಪ್ರತೀಕವಾಗಿ ಅಯೋಧ್ಯೆಯಲ್ಲಿ ದೇಶದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಭವ್ಯ ಶ್ರೀ ರಾಮ ಮಂದಿರದೊಂದಿಗೆ ದೇಶಕ್ಕೆ ಎದುರಾಗಿರುವ ಕೊರೊನಾ ಭಯ ನಿವಾರಣೆಯಾಗಿ ಮನು ಕುಲಕ್ಕೆ ಒಳಿತಾಗಲೆಂದು ಹಾರೈಸಿದರು.