ಮಡಿಕೇರಿ, ಜು. 7: ತಿತಿಮತಿಯ ಸರಕಾರಿ ಪ್ರೌಢಶಾಲೆಯಲ್ಲಿ ಇತ್ತೀಚೆಗೆ ಎಸ್ಎಸ್ಎಲ್ಸಿ ಪರೀಕ್ಷೆ ನಡೆದ ಸಂದರ್ಭ ಅಲ್ಲಿನ ಪರೀಕ್ಷಾ ಕೇಂದ್ರದ 176 ವಿದ್ಯಾರ್ಥಿಗಳಿಗೆ ಗೋಣಿಕೊಪ್ಪಲಿನ ಮಾನಸ ಮೆಡಿಕಲ್ಸ್ ವತಿಯಿಂದ ಬಿಸ್ಕೆಟ್ ವಿತರಿಸಲಾಯಿತು. ಈ ಸಂದರ್ಭ ಮಾಲೀಕರಾದ ಕವಿತಾ ಪೂಣಚ್ಚ ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕ ವಿ.ಎ ದಿನೇಶ್, ಪ್ರಶ್ನೆಪತ್ರಿಕೆಗಳ ಅಭಿ ರಕ್ಷಕ ಯು.ಕೆ ಅಶ್ರಫ್ ಮತ್ತು ಸಿಬ್ಬಂದಿಗಳು ಹಾಜರಿದ್ದರು.