ಚೆಟ್ಟಳ್ಳಿ, ಜು. 8: ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ಸೌದಿ ಅರೇಬಿಯಾ ರಾಷ್ಟ್ರೀಯ ಸಮಿತಿಯ ವತಿಯಿಂದ ಮಡಿಕೇರಿಯಲ್ಲಿ ಕ್ವಾರಂಟೈನಿನಲ್ಲಿರುವರಿಗೆ ಆಹಾರ ಸಾಮಗ್ರಿಗಳ ವಿತರಣೆ ಕಾರ್ಯಕ್ರಮವು ಮರ್ಕಝುಲ್ ಹಿದಾಯ ಕೊಟ್ಟಮುಡಿಯಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸಯ್ಯದ್ ಇಲ್ಯಾಸ್ ಸಖಾಫಿ ತಂಙಳ್, ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ಹಾಗೂ ಸೌದಿ ಅರೇಬಿಯಾ ರಾಷ್ಟ್ರೀಯ ಸಮಿತಿ ಹಲವಾರು ಸಮಾಜಸೇವೆಗಳನ್ನು ಮಾಡುತ್ತಾ ಬಂದಿದೆ.

ಈ ಸಮಾಜದಲ್ಲಿನ ಬಡವರ ಪಾಲಿನ ಆಶಾಕಿರಣವಾಗಿದೆ ಕಿಸ್ವಾ ಹಾಗೂ ಕೆ.ಎಸ್.ಎ. ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಕ್ವಾರಂಟೈನ್‍ನಲ್ಲಿರುವವರಿಗೆ ಆಹಾರ ಸಾಮಗ್ರಿಗಳನ್ನು ವಿತರಿಸಿ ಮಾನವೀಯತೆ ಮೆರೆದಿದ್ದಾರೆ ಎಂದು ಇಲ್ಯಾಸ್ ತಂಙಲ್ ಹೇಳಿದರು.

ಕಿಸ್ವಾ, ಕೆ.ಎಸ್.ಎ. ನಿರ್ದೇಶಕ ಹಫೀಳ್ ಸಅದಿ ಮಾತನಾಡಿ, ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ಜಿಲ್ಲೆಯಲ್ಲಿ ಸಂಭವಿಸಿದ ಜಲಪ್ರಳಯದ ಸಂದರ್ಭ ಜಿಲ್ಲೆಯ ಜನತೆಗೆ ಸಹಾಯ ಹಸ್ತವನ್ನು ಚಾಚಿದ್ದರು. ಇದೀಗ ವಿದೇಶದಿಂದ, ಹಾಗೂ ದೇಶದ ವಿವಿಧ ರಾಜ್ಯಗಳಿಂದ ಬಂದು ಮಡಿಕೇರಿಯಲ್ಲಿ ಕ್ವಾರಂಟೈನ್‍ನಲ್ಲಿರುವವರಿಗೆ ಆಹಾರ ಸಾಮಗ್ರಿಗಳನ್ನು ವಿತರಿಸಿದ್ದಾರೆ ಎಂದು ಹಫೀಲ್ ಸಹದಿ ಹೇಳಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ಕರ್ನಾಟಕ ಮುಸ್ಲಿಂ ಜಮಾಅತ್ ಕೊಡಗು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹಾಜಿ ಉದ್ಘಾಟಿಸಿದರು. ಈ ಸಂದರ್ಭ ಕಿಸ್ವಾ, ಕೆ.ಎಸ್.ಎ. ಪ್ರಮುಖರಾದ ಅಬ್ದುಲ್ ಖಾದರ್ ಎಮ್ಮೆಮಾಡು, ರಫೀಕ್ ನೆಲ್ಲಿಹುದಿಕೇರಿ, ಇಸ್ಮಾಯಿಲ್ ಸಖಾಫಿ ಕೊಂಡಂಗೇರಿ, ವಿ.ಪಿ. ಮೊಹಿದ್ದೀನ್ ಪೆÇನ್ನತ್ಮೊಟ್ಟೆÉ ಹಾಗೂ ಕಿಸ್ವಾ ಸದಸ್ಯರು ಹಾಜರಿದ್ದರು. ಖಾಸಿಂ ಸಖಾಫಿ ಕೊಂಡಂಗೇರಿ ಸ್ವಾಗತಿಸಿ, ವಂದಿಸಿದರು.

ಮರ್ಕಜ್ ಶಾಲೆ ಆಶ್ರಯದಲ್ಲಿ ಕಿಟ್ ವಿತರಣೆ