ಮಡಿಕೇರಿ, ಜು.5: ರೋಟರಿ ಸಂಸ್ಥೆಯ ಜಿಲ್ಲಾ ವಿಪತ್ತು ನಿರ್ವಹಣಾ ನಿಧಿಯಡಿ ಸುಮಾರು 4.50 ಲಕ್ಷ ರೂ ವೆಚ್ಚದ ಕಾರ್ಡಿಯಾಕ್ ಮಾನಿಟರನ್ನು ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಇತ್ತೀಚೆಗೆ ಹಸ್ತಾಂತರಿಸಲಾಯಿತು.
ಜಿಲ್ಲಾ ಗೌವರ್ನರ್ ಡಾ.ಜೋಸೆಫ್ ಮ್ಯಾಥ್ಯು, ಮೈಸೂರು ಮಹಾನಗರ ಪಾಲಿಕೆಯ ಮುಖ್ಯ ಆರೋಗ್ಯಾಧಿಕಾರಿ ಡಾ.ಜಯಂತ್, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಅಧೀಕ್ಷಕ ಡಾ.ಎ.ಜೆ.ಲೋಕೇಶ್ ಅವರ ಮುಖಾಂತರ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ರೋಟರಿ ಸಹಾಯಕ ಗೌವರ್ನರ್ ಪಿ.ಕೆ ರವಿ, ವಲಯ ಕಾರ್ಯದರ್ಶಿ ಎಚ್.ಟಿ ಅನಿಲ್, ರೋಟರಿ ಮಾಜಿ ಗೌವರ್ನರ್ ಸುರೇಶ್ ಚಂಗಪ್ಪ, ಕುಶಾಲನಗರ ರೋಟರಿ ಅಧ್ಯಕ್ಷ ಅಶೋಕ್, ಮಡಿಕೇರಿ ರೋಟರಿ ಅಧ್ಯಕ್ಷ ರತನ್ ತಮ್ಮಯ್ಯ, ಪಿರಿಯಾಪಟ್ಟಣ ರೋಟರಿ ಅಧ್ಯಕ್ಷ ಸುಬ್ರಮಣ್ಯ ಇತರರು ಇದ್ದರು.