*ಸಿದ್ದಾಪುರ, ಜು. 1: ಧಾರಾಕಾರ ಮಳೆ ಯಿಂದಾಗಿ ಪ್ರವಾಸಿಗರ ವಾಹನವೊಂದು ನಿಯಂತ್ರಣ ಕಳೆದು ಕೊಂಡು ತೋಟ ದೊಳಗೆ ಮಗುಚಿ ಕೊಂಡ ಘಟನೆ ನಡೆದಿದೆ.

ಅಭ್ಯತ್‍ಮಂಗಲ ಸುತ್ತಮುತ್ತ ಸಂಜೆ ವೇಳೆ ಧಾರಾಕಾರ ಮಳೆಯಾಗಿದ್ದು, ಈ ಸಂದರ್ಭದಲ್ಲಿ ರಸ್ತೆಯಲ್ಲಿ ಸಾಗುತ್ತಿದ್ದ ಪ್ರವಾಸಿಗರ ಇನ್ನೋವ ವಾಹನ (ಕೆಎ-51-2278) ಚಾಲಕನ ನಿಯಂತ್ರಣ ಕಳೆದುಕೊಂಡು ಕಾನನ್‍ಕಾಡು ಬಳಿಯ ಟಾಟಾ ಸಂಸ್ಥೆಯ ತೋಟದೊಳಗೆ ನುಗ್ಗಿ ಮಗುಚಿಕೊಂಡಿದೆ. ಕಾರಿನೊಳಗಡೆ ಐವರು ಪ್ರಯಾಣಿಕರಿದ್ದು, ಅಪಾಯದಿಂದ ಪಾರಾಗಿದ್ದಾರೆ. ಸಂಜೆ 6.45ಕ್ಕೆ ಈ ಘಟನೆ ಸಂಭವಿಸಿದ್ದು, ಸ್ಥಳೀಯರು ಸ್ಥಳಕ್ಕೆ ಧಾವಿಸಿ, ಪ್ರವಾಸಿಗರನ್ನು ಬೇರೆ ವಾಹನಗಳಲ್ಲಿ ಆಸ್ಪತ್ರೆಗೆ ಸಾಗಿಸಿದ್ದಾರೆ.

-ಸುಧಿ.