ವೀರಾಜಪೇಟೆ, ಜೂ. 27: ಉದರ ಬೇನೆಯಿಂದ ಮನನೊಂದು ಮಹಿಳೆಯೊರ್ವರು ಅತ್ಮಹತ್ಯೆಗೆ ಶರಣಾದ ಘಟನೆ ವೀರಾಜಪೇಟೆ ತೋಮರ ಗ್ರಾಮದಲ್ಲಿ ನಡೆದಿದೆ. ಕೆದಮಳ್ಳೂರು ಪಂಚಾಯಿತಿ ವ್ಯಾಪ್ತಿಯ ತೋಮರ ಗ್ರಾಮದ ನಿವಾಸಿ ಕೆ.ಗಣೇಶ್ ಅವರ ಪತ್ನಿ ಕೆ.ಜಿ. ಸರಸ್ವತಿ (42) ವಿಷ ಪ್ರಾಶನ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರು ಕೇರಳ ರಾಜ್ಯದ ಮನೆಯೊಂದರಲ್ಲಿ ಗೃಹ ಶುಶ್ರೂಷಕಿಯಾಗಿ ಕಾರ್ಯ ನಿರ್ವಹಿಸುತಿದ್ದರು . ಒಂದು ತಿಂಗಳ ಹಿಂದೆ ಪತಿಯ ತಂದೆಗೆ ಅನಾರೋಗ್ಯ ವೆಂದು ಸ್ವಗ್ರಾಮಕ್ಕೆ ಅಗಮಿಸಿದ್ದರು.
ಕಳೆದ ಹಲವಾರು ತಿಂಗಳು ಗಳಿಂದ ಉದರ ಬೇನೆಯಿಂದ ಬಳಲು ತಿದ್ದು, ಮನೆಯಲ್ಲಿದ್ದ ಕ್ರಿಮಿನಾಶಕವನ್ನು ಕುಡಿದಿದ್ದಾರೆ. ವೀರಾಜಪೇಟೆ ಸರ್ಕಾರಿ ಅಸ್ಪತ್ರೆಯಲ್ಲಿ ದಾಖಲಿಸಿದ್ದು, ಹೆಚ್ಚಿನ ಚೀಕಿತ್ಸೆಗಾಗಿ ಕೆ.ವಿ.ಜಿ. ಆಸ್ಪತ್ರೆ ಸುಳ್ಯಕ್ಕೆ ಕರೆದೊಯ್ದರು ಚಿಕಿತ್ಸೆ ಫಲಕಾರಿ ಯಾಗಿಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತರ ಮಗ ಗಗನ್ ನೀಡಿದ ದೂರಿನ ಮೇರೆಗೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.