ಮಡಿಕೇರಿ, ಜೂ. 15 : 2020ರ ಮುಂಗಾರು ಪ್ರಾರಂಭವಾಗಿದ್ದು, ಭತ್ತದ ಕೃಷಿ ಮಾಡುವ ರೈತರಿಗೆ ರಿಯಾಯಿತಿ ದರದಲ್ಲಿ ಕೃಷಿ ಇಲಾಖೆಯ ಮುಖಾಂತರ ಇಂಟಾನ್, ತುಂಗ, ಬಿ.ಆರ್.2655, ಅತಿರ, ಆರ್‍ಎನ್‍ಆರ್ 15048 ಭತ್ತದ ಬೀಜಗಳನ್ನು ವಿತರಿಸಲಾಗುತ್ತಿದ್ದು, ಅವಶ್ಯಕ ದಾಖಲಾತಿಗಳೊಂದಿಗೆ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ಪಡೆದುಕೊಳ್ಳುವಂತೆ ಮಡಿಕೇರಿ ತಾಲೂಕು ಸಹಾಯಕ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.