ಗೋಣಿಕೊಪ್ಪ ವರದಿ, ಜೂ. 7 : ಕಿರುಗೂರು ಗ್ರಾಮದಲ್ಲಿ ಅನೆಗಳ ಪುಂಡಾಟದಿಂದ ಬೆಳೆಗಳು ನಾಶವಾಗಿವೆ. ಶನಿವಾರ ರಾತ್ರಿ ಆನೆಗಳ ಹಿಂಡು ತೋಟಕ್ಕೆ ಲಗ್ಗೆ ಇಟ್ಟು ಅಪಾರ ಪ್ರಮಾಣದ ಬೆಳೆ ನಾಶ ಮಾಡಿವೆ. ಅಲ್ಲಿನ ಗಾಣಂಗಡ ಉತ್ತಯ್ಯ, ಹರೀಶ್, ನವೀನ, ಕಾಕಮಾಡ ಮಾದಪ್ಪ, ಆಲೆಮಾಡ ಸಾಗರ್, ಪುಳ್ಳಂಗಡ ಪವನ್, ಗಾಣಂಗಡ ರಮೇಶ್, ಕಾಕಮಾಡ ಹರೀಶ್, ಪೂವಯ್ಯ ಎಂಬುವವರಿಗೆ ಸೇರಿದ ತೋಟಗಳಲ್ಲಿ ಬೆಳೆ ನಷ್ಟವಾಗಿದೆ. ಮರ ಗೆಣಸು, ಬಾಳೆ, ತೆಂಗು ಫಸಲುಗಳನ್ನು ತುಳಿದು ಮನಸ್ಸೋ ಇಚ್ಚೆ ಕಿತ್ತೆಸೆದು ಚೆಲ್ಲಾಪಿಲ್ಲಿಯಾಗಿ ನಾಶ ಮಾಡಿವೆ. ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದೆ.