ಗೋಣಿಕೊಪ್ಪಲು, ಜೂ. 1: ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ವತಿಯಿಂದ ಕೊಡಗಿನ ಗಡಿ ಕುಟ್ಟ ಗ್ರಾಮದಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ಕೊರೊನಾ ಎಚ್ಚರಿಕೆ ಬಗ್ಗೆ ಮನವಿಯ ಪೆÇೀಸ್ಟರನ್ನು ಪ್ರಚಾರಗೊಳಿಸಲಾಯಿತು. ಸಾರ್ವಜನಿಕ ಸ್ಥಳವನ್ನು ಶುಚಿಯಾಗಿಡುವ ನಿಟ್ಟಿನಲ್ಲಿ ಅಲ್ಲಲ್ಲಿ ಉಗುಳದಂತೆ, ಮಾಸ್ಕ್ ಕಡ್ಡಾಯದ ಬಗ್ಗೆ ಮತ್ತು ಉಲ್ಲಂಘಿಸಿದಲ್ಲಿ ತೆರಬೇಕಾದ ದಂಡದ ಬಗ್ಗೆ ಮಾಹಿತಿಯನ್ನು ನೀಡಲಾಗಿದ್ದು ಕುಟ್ಟ ಚೇಂಬರ್ ಆಫ್ ಕಾಮರ್ಸ್ ನ ಅಧ್ಯಕ್ಷ ಮುಕ್ಕಾಟೀರ ನವೀನ್ ಅಯ್ಯಪ್ಪ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಕೊಡಗು ಜಿಲ್ಲಾ ಚೇಂಬರ್ ಉಪಾಧ್ಯಕ್ಷ ಎಂ.ಪಿ. ಕೇಶವ ಕಾಮತ್, ಕುಟ್ಟ ಗ್ರಾಮದ ಉದ್ಯಮಿ ಕಾಳಯ್ಯ, ವರ್ತಕ ಪೆÇೀಕರ್, ಕಾಫಿ ಬೆಳೆಗಾರ ಚಕ್ಕೇರ ಧರ್ಮಜ ದೇವಯ್ಯ, ಚಕ್ಕೇರ ಗಣಪತಿ, ಮುಕ್ಕಾಟೀರ ಶ್ರವಣ್ ಸುಬ್ಬಯ್ಯ, ಚಂದನ್ ಕಾಮತ್, ಪ್ರತಾಪ್ ಇದ್ದರು. ಕುಟ್ಟದ ಪ್ರಮುಖ ಸ್ಥಳಗಳಲ್ಲಿ ಮತ್ತು ಬಸ್ ನಿಲ್ದಾಣದಲ್ಲಿ, ಹೆಚ್‍ಪಿ ಪೆಟ್ರೋಲ್ ಬಂಕ್‍ನಲ್ಲಿ ಮಾಹಿತಿ ಪ್ರಚಾರ ಫಲಕವನ್ನು ಪ್ರಚುರಪಡಿಸಲಾಯಿತು