ಮಡಿಕೇರಿ, ಮೇ 25 : ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರಾಗಿ ನೇಮಕಗೊಂಡ ಡಿ.ಕೆ.ಶಿವಕುಮಾರ್ ಅವರ ಪದಗ್ರಹಣ ಕಾರ್ಯಕ್ರಮದ ಸಿದ್ಧತೆ ಮತ್ತು ಕೊರೊನಾ ವೈರಸ್ ಸ್ಥಿತಿಗತಿಗಳ ಬಗ್ಗೆ ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಸಭೆ ನಡೆಯಿತು. ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಕೆ. ಮಂಜುನಾಥ್ ಕುಮಾರ್ ವಹಿಸಿದ್ದರು.

ಪಕ್ಷದ ಕೆಪಿಸಿಸಿ ವೀಕ್ಷಕರುಗಳಾದ ಹಾಗೂ ಕೊರೊನಾ ಟಾಸ್ಕ್‍ಪೋರ್ಸ್‍ನ ಜಿಲ್ಲಾ ಅಧ್ಯಕ್ಷರುಗಳಾದ ವಿಧಾನಸಭಾ ಸದಸ್ಯ ಆರ್.ಧರ್ಮಸೇನ, ಜಿಲ್ಲಾ ವೀಕ್ಷಕರಾದ ಮಂಜುಳ ರಾಜ್, ಮಡಿಕೇರಿ ವಿಧಾನಸಭಾ ವೀಕ್ಷಕ ವೆಂಕಪ್ಪ ಗೌಡ, ವೀರಾಜಪೇಟೆ ವಿಧಾನಸಭಾ ಕ್ಷೇತ್ರ ವೀಕ್ಷಕ ಟಿ.ಎಂ.ಶಾಹಿದ್, ವಿಧಾನ ಪರಿಷತ್ ಸದಸ್ಯೆ ವೀಣಾಅಚ್ಚಯ್ಯ, ಪ್ರಮುಖರಾದ ಟಿ.ಪಿ.ರಮೇಶ್, ತಾರಾ ಅಯ್ಯಮ್ಮ, ಎಸ್.ಸಿ.ಘಟಕದ ಸಂಚಾಲಕ ಕಾಳಯ್ಯ ಪಾಲ್ಗೊಂಡು ಸಲಹೆ ಸೂಚನೆಗಳನ್ನು ನೀಡಿದರು. ಇದೇ ಸಂದರ್ಭ ಕೆಪಿಸಿಸಿ ವೀಕ್ಷಕರುಗಳನ್ನು ಜಿಲ್ಲಾ ಕಾಂಗ್ರೆಸ್ ವತಿಯಿಂದ ಶಾಲು ಹೊದಿಸಿ ಸನ್ಮಾನಿಸಲಾಯಿತು.

ಸಭೆಯಲ್ಲಿ ಕಾಂಗ್ರೆಸ್ ವಕ್ತಾರ ಟಿ.ಇ.ಸುರೇಶ್, ನಾಪೋಕ್ಲು ಬ್ಲಾಕ್ ಅಧ್ಯಕ್ಷ ಕೆ.ಇ.ಇಸ್ಮಾಯಿಲ್, ಪೊನ್ನಂಪೇಟೆ ಬ್ಲಾಕ್ ಅಧ್ಯಕ್ಷ ಮಿದೇರಿರ ನವೀನ್, ವೀರಾಜಪೇಟೆ ಬ್ಲಾಕ್ ಅಧ್ಯಕ್ಷ ರಂಜಿ ಪೂಣಚ್ಚ, ಕೊಡಗು ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಕೆ.ಎ.ಯಾಕುಬ್, ಮಹಿಳಾ ಘಟಕದ ಅಧ್ಯಕ್ಷ್ಷೆÀ ಸುರಯ್ಯ ಅಬ್ರಾರ್, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಎಂ.ಎ.ಉಸ್ಮಾನ್, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಸಂಯೋಜಕ ತೆನ್ನಿರಮೈನಾ, ಪ್ರಮುಖರಾದ ಮಿಟ್ಟುಚಂಗಪ್ಪ, ಬಿ.ಬಿ.ಸತೀಶ್ ಕುಮಾರ್, ರಾಘವೇಂದ್ರ, ಅನಂತಕುಮಾರ್, ಜನಾರ್ಧನ, ಸತೀಶ್ ಕುಮಾರ್, ಪಿ.ವಿ.ಜಾನ್ಸನ್, ತ್ರಿಣೇಶ್, ಸರ ಚಂಗಪ್ಪ, ಎನ್.ಎಂ.ಉಮೇಶ್, ಪ್ರೇಮ ಕೃಷ್ಣಪ್ಪ, ಕಾವೇರಮ್ಮ ಸೋಮಣ್ಣ ಹಾಗೂ ಡಿಸಿಸಿ ಪದಾಧಿಕಾರಿಗಳು ಹಾಜರಿದ್ದರು.

ಮಡಿಕೇರಿ ವಿಧಾನಸಭಾ ಕ್ಷೇತ್ರಕ್ಕೆ ಒಳಪಟ್ಟ ಸೋಮವಾರಪೇಟೆ, ಕುಶಾಲನಗರ, ಮಡಿಕೇರಿ ಬ್ಲಾಕ್ ಅಧ್ಯಕ್ಷರುಗಳು ಮತ್ತು ಪಕ್ಷದ ಪದಾಧಿಕಾರಿಗಳು ಕಾರ್ಯಕ್ರಮದ ಕುರಿತು ವಿವರಿಸಿದರು. ಡಿಸಿಸಿ ಪ್ರಧಾನ ಕಾರ್ಯದರ್ಶಿ ವಿ.ಪಿ.ಸುರೇಶ್ ಸ್ವಾಗತಿಸಿ, ಸಾಮಾಜಿಕ ಜಾಲತಾಣದ ಸೂರಜ್ ಹೊಸೂರು ನಿರೂಪಿಸಿ, ಡಿಸಿಸಿ ವಕ್ತಾರ ಟಾಟು ಮೊಣ್ಣಪ್ಪ ವಂದಿಸಿದರು.