ಸುಂಟಿಕೊಪ್ಪ, ಮೇ 19: ಇಲ್ಲಿಗೆ ಸಮೀಪದ ಗದ್ದೆಹಳ್ಳದ ವಿಕಾಸ್ ಜನ ಸೇವಾ ಟ್ರಸ್ಟ್‍ನ ಜೀವನದಾರಿ ಆಶ್ರಮದ ವತಿಯಿಂದ ಜೆಸಿಐ ಸುಂಟಿಕೊಪ್ಪದ ಸಹಕಾರದೊಂದಿಗೆ ಐದು ಜನ ಅನಾಥರಿಗೆ ಆಸರೆ ಕಲ್ಪಿಸಲಾಯಿತು. ರಾಜಸ್ಥಾನ್ ಮೂಲದ ವಾಸುದೇವ, ಕೇರಳ ಮೂಲದ ತಂಬಿ, ಮೈಸೂರು ಮೂಲದ ಕಮಲಮ್ಮ, ಜಾರ್ಖಾಂಡ್ ಮೂಲದ ಲಲಿತ, ತಮಿಳುನಾಡು ಮೂಲದ ವೀರಮ್ಮ ಲಾಕ್‍ಡೌನ್ ಸಮಯದಲ್ಲಿ ಅನ್ನ-ಆಹಾರವಿಲ್ಲದೆ ಬೀದಿ ಬದಿಯಲ್ಲಿ ಅನಾಥರಾಗಿ ತಿರುಗಾಡುತ್ತಿದ್ದ ವೇಳೆ ರಕ್ಷಿಸಿ ಕೊಡಗು ಜಿಲ್ಲೆಯ ಜಿಲ್ಲಾಸ್ಪತ್ರೆ ಮತ್ತು ಪೊಲೀಸ್ ಇಲಾಖೆಯ ನೆರವಿನೊಂದಿಗೆ ಬೆಂಗಳೂರಿನ ದೊಡ್ಡಗುಬ್ಬಿಯಲ್ಲಿರುವ ಹೋಮ್ ಆಫ್ ಹೋಪ್ (ಆಟೋ ರಾಜ ಕೇಂದ್ರ) ಆಶ್ರಮದಲ್ಲಿ ಆಶ್ರಯ ಕಲ್ಪಿಸಲಾಯಿತು.