ನಾಪೋಕ್ಲು, ಮೇ 17: ಈಜಲು ತೆರಳಿದ್ದ ಯುವಕನೊಬ್ಬ ನೀರು ಪಾಲಾದ ಘಟನೆ ನಡೆದಿದೆ. ಭಾನುವಾರ ಸಂಜೆ ಯುವಕರು ಸಮೀಪದ ಚೆರಿಯಪರಂಬುವಿನ ಕಾವೇರಿ ಹೊಳೆಯಲ್ಲಿ ಈಜಲು ತೆರಳಿದ್ದರು. ಇಬ್ಬರು ಯುವಕರು ನೀರಿನಲ್ಲಿ ಮುಳುಗಿದ್ದು, ಓರ್ವ ಸಾವನ್ನಪ್ಪಿದ್ದಾನೆ. ಪಾಲೂರು ಗ್ರಾಮದ ಮೇಪಾಡಂಡ ರಮೇಶ್ ಮೊಣ್ಣಪ್ಪ ಮತ್ತು ಪುಷ್ಪಾ ದಂಪತಿಗಳ ಪುತ್ರ ನಿತಿನ್ (27) ಸಾವನ್ನಪ್ಪಿದ ದುರ್ದೈವಿ. ಇನ್ನೋರ್ವ ಅಪಾಯದಿಂದ ಪಾರಾಗಿದ್ದಾನೆ. ಮೃತದೇಹದ ಹುಡುಕಾಟ ಕಾರ್ಯ ಮುಂದುವರೆದಿದ್ದು, ನಾಪೋಕ್ಲು ಠಾಣಾಧಿಕಾರಿ ಆರ್.ಕಿರಣ್ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
-ದುಗ್ಗಳ