ವೀರಾಜಪೇಟೆ, ಮೇ 14: ಕೇರಳ ರಾಜ್ಯದಿಂದ ಯಾವುದೇ ಅಕ್ರಮ ವಲಸಿಗರು ಕೊಡಗಿಗೆ ನುಸುಳದಂತೆ ಬಂದೋಬಸ್ತ್‍ಗಾಗಿ ಮಾಕುಟ್ಟ ಚೆಕ್‍ಪೋಸ್ಟ್ ಬಳಿಯಲ್ಲಿ ರಸ್ತೆಗೆ ಅಡ್ಡಲಾಗಿ ಹಾಕಿದ್ದ ಮಣ್ಣಿನ ಗುಡ್ಡೆಯನ್ನು ನಿನ್ನೆ ಮಧ್ಯರಾತ್ರಿ ಯಾರೋ ಭಾಗಶಃ ತೆರವು ಮಾಡಿ ವಾಹನಗಳು ಸಂಚರಿಸಿರುವುದು ಪತ್ತೆಯಾಗಿದೆ.

ಸ್ಥಳಕ್ಕೆ ತೆರಳಿದ ತಹಶೀಲ್ದಾರ್ ನಂದೀಶ್ ಜೆಸಿಬಿ ಯಂತ್ರದ ಮೂಲಕ ಮಣ್ಣುಗುಡ್ಡೆಯನ್ನು ಪುನಃ ಹಾಕಿ ಬಂದೋಬಸ್ತ್ ಮಾಡಿದ್ದು ಗೇಟ್‍ನಲ್ಲಿ ಅಳವಡಿಸಿದ್ದ ಸಿ.ಸಿ.ಕ್ಯಾಮೆರಾ ಪರಿಶೀಲಿಸಿ ಕ್ರಮ ಕೈಗೊಂಡಿದ್ದಾರೆ.