ನವದೆಹಲಿ, ಮೇ 13 ಕೊರೊನಾ ಲಾಕ್ಡೌನ್ ಸಂಕಷ್ಟದಿಂದ ಬವಣೆಗೀಡಾದ ಭಾರತೀಯರಿಗೆ ಇಪ್ಪತ್ತು ಲಕ್ಷ ಕೋಟಿ ಪ್ಯಾಕೇಜಿನ ಕುರಿತು ಮಂಗಳವಾರ ಪ್ರಧಾನಿ ಘೋಷಿಸಿದ್ದ ಕುರಿತು ಇಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ನವದೆಹಲಿಯಲ್ಲಿ ವಿವರ ಮಾಹಿತಿಯಿತ್ತರು. ಸಂಜೆ 4 ಗಂಟೆಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಆದಾಯ ತೆರಿಗೆದಾರರು ಹಾಗೂ ಸಣ್ಣ ಕೈಗಾರಿಕೆಗಳಿಗೆ ಬಂಪರ್ ಗಿಫ್ಟ್ ನೀಡಿದ್ದಾರೆ. ಅದೇ ರೀತಿ ರಿಯಲ್ ಎಸ್ಟೇಟ್ ಉದ್ಯಮಕ್ಕೆ ಉತ್ತೇಜನವಿತ್ತಿದ್ದಾರೆ. ಜೊತೆಗೆ ಸರಕಾರಿ ಗುತ್ತಿಗೆದಾರರಿಗೆ ಕೊರೊನಾ ಲಾಕ್ಡೌನ್ ಪರಿಣಾಮದ ಸಂಕಟದಿಂದ ಹೊರಬರಲು ಅವಕಾಶ ಕಲ್ಪಿಸಿದ್ದಾರೆ. ಪ್ರಾವಿಡೆಂಟ್ ಫಂಡ್ಗೆ ಮಾಲೀಕರು, ಉದ್ಯೋಗಿಗಳ ಪರವಾಗಿ ಸರಕಾರ ಹೊರೆ ಹೊರುವ ಈ ಹಿಂದಿನ ನೆರವನ್ನು ಸದ್ಯಕ್ಕೆ ಮುಂದುವರಿಸಲಾಗುತ್ತದೆ. ವಿದ್ಯುತ್ ಉತ್ಪಾದನಾ ಘಟಕಗಳಿಗೆ ಭಾರೀ ನೆರವು ಕಲ್ಪಿಸಲಾಗಿದೆ. ಸಹಕಾರೀ ರಂಗವೂ ಸೇರಿದಂತೆ ಬ್ಯಾಂಕೇತರ ಆರ್ಥಿಕ ವಹಿವಾಟು ಸಂಸ್ಥೆಗಳಿಗೂ ನೆರವು ಒದಗಿಸಲಾಗುತ್ತದೆ. ಮಂಗಳವಾರ ಪ್ರಧಾನಿ ಮೋದಿ ಅವರು ಭಾಷಣದಲ್ಲಿ ಪ್ರಸ್ತಾಪಿಸಿದ್ದ ಆತ್ಮ ನಿರ್ಭರ ಭಾರತ ಅಭಿಯಾನದ ಅಂಶಗಳನ್ನು ವಿತ್ತ ಸಚಿವರು ಇಂದು ಪುನರುಚ್ಚರಿಸಿದರು. ಎಲ್ಲ ಭಾಷೆಗಳಲ್ಲಿ ಅದರ ಅರ್ಥ ವಿವರಣೆÉ ನೀಡುತ್ತ ಕನ್ನಡದಲ್ಲಿ ಈ ಅಭಿಯಾನವನ್ನು ಸ್ವಯಂ ಅವಲಂಬಿತ (ಸ್ವಾವಲಂಬಿ) ಎಂದು ಕರೆದರು.ಇದುವರೆಗೆ 52 ಸಾವಿರ ಕೋಟಿ ರೂಪಾಯಿ ಯನ್ನು ಜನಧನ ಖಾತೆಗಳಿಗೆ ವರ್ಗಾಯಿಸಿದ್ದೇವೆ. ಅಲ್ಲದೆ, 42 ಕೋಟಿ ಜನರು ಫಲಾನುಭವಿ ಗಳಾಗಿದ್ದಾರೆ. ಮುಂದಿನ ಕೆಲದಿನಗಳವರೆಗೆ ಹಂತ ಹಂತವಾಗಿ ಯೋಜನೆಗಳನ್ನು ಘೋಷಿಸಲಿದ್ದೇವೆ. ಒಂದೊಂದು ವಲಯಕ್ಕೆ ಒಂದೊಂದು ದಿನ ಯೋಜನೆಗಳನ್ನು ಘೋಷಿಸಲಿದ್ದೇವೆ ಎಂದು ಹೇಳಿದರು. ಇಂದು ವಿತ್ತ ಸಚಿವರು ಮುಂದಿನ ಯೋಜನೆಗಳ ವಿವರ ಮಾಹಿತಿಯಿತ್ತರು.
ಸಣ್ಣ ಕೈಗಾರಿಕೆಗಳಿಗೆ ಭಾರೀ ನೆರವು
ಸಣ್ಣ ಕೈಗಾರಿಕೆಗಳಿಗೆ 3ಲಕ್ಷ ಕೋಟಿ ರೂಪಾಯಿ ಅನುದಾನ ನೀಡಲಾಗಿದೆ. ಇದರಿಂದ 45 ಲಕ್ಷ ಕೈಗಾರಿಕೆಗಳಿಗೆ ಅನುಕೂಲವಾಗಲಿದೆ. ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಅಡಮಾನವಿಲ್ಲದೆ ಸಾಲ ನೀಡಲು ಕೇಂದ್ರ ಸರಕಾರ ನಿರ್ಧರಿಸಿದೆ. 25 ರಿಂದ 100 ಕೋಟಿ ರೂಪಾಯಿ ವಹಿವಾಟು ಹೊಂದಿರುವ ಕೈಗಾರಿಕೆಗಳಿಗೆ ಅನುಕೂಲವಾಗಲಿದೆ.
ಸಾಲ ಮರುಪಾವತಿಗೆ ನಾಲ್ಕು ವರ್ಷಗಳವರೆಗೆ ಕಾಲಾವಕಾಶ ನೀಡಲಾಗಿದೆ. ಸಾಲ ನೀಡಿದ ಮೊದಲ 12 ತಿಂಗಳವರೆಗೆ ಸಾಲ ಮರುಪಾವತಿಸುವ ಅಗತ್ಯವಿಲ್ಲ. ಬ್ಯಾಂಕುಗಳು ನೀಡುವ ಸಾಲಕ್ಕೆ ಕೇಂದ್ರ ಸರಕಾರವೇ ಗ್ಯಾರಂಟಿ ನೀಡಲಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಸಣ್ಣ ಕೈಗಾರಿಕೆಗಳು ಉದ್ಯೋಗಿಗಳಿಗೆ ಸಂಬಳ ನೀಡಲು ಹಣ ಇಲ್ಲದಿದ್ದರೆ, ಕೇಂದ್ರ ನೆರವು ನೀಡುತ್ತದೆ. ಮೂರು ತಿಂಗಳವರೆಗೆ ಎಟಿಎಂ ಗಳಲ್ಲಿ ಹಣ ಪಡೆಯಲು ಯಾವುದೇ ಶುಲ್ಕ ಇಲ್ಲ. ಅಕ್ಟೋಬರ್ 31ರವರೆಗೆ ಕೈಗಾರಿಕೆಗಳು ಸಾಲ ಪಡೆಯಬಹುದು. ಸಂಕಷ್ಟದ ಲ್ಲಿರುವ ಸಣ್ಣ ಕೈಗಾರಿಕೆಗಳಿಗೆ 20 ಸಾವಿರ ಕೋಟಿ ರೂಪಾಯಿ ಸಹಾಯಕ ಸಾಲ ನೀಡಲಾಗುವುದು. ಸಣ್ಣ ಕೈಗಾರಿಕೆಗಳಿಗೆ ಸರಕಾರ ಉಳಿಸಿಕೊಂಡಿರುವ ಬಾಕಿಯನ್ನು ವಾಪಸ್ ಕೊಡಲಿದ್ದೇವೆ. ಮುಂದಿನ 45 ದಿನಗಳಲ್ಲಿ ಬಾಕಿ ವಾಪಸ್ ನೀಡಲಾಗುವುದು. 1 ಕೋಟಿ ರೂ. ಹೂಡಿಕೆಯಿರುವ ಕೈಗಾರಿಕೆÀಗಳನ್ನು ಇನ್ನು ಮುಂದೆ ಸೂಕ್ಷ್ಮ ಕೈಗಾರಿಕೆಗಳೆಂದು ಪರಿಗಣಿಸಲಾಗುತ್ತದೆÉ ಎಂದರು.
ಟಿಡಿಎಸ್, ಟಿಸಿಎಸ್ ಶೇ.25 ಕಡಿತ
ಕೇಂದ್ರ ಸರಕಾರವು ಟಿಡಿಎಸ್, ಟಿಸಿಎಸ್ಗಳಿಗೆ ಶೇ.25ರಷ್ಟು ಕಡಿತ ಮಾಡಿದೆ. ಇದರಿಂದ ಜನರಿಗೆ 50 ಸಾವಿರ ಕೋಟಿ ರೂಪಾಯಿ ಉಳಿತಾಯ ಆದಂತಾಗಿದೆ. ಇದು ಗುರುವಾರದಿಂದಲೇ ಜಾರಿಯಾಗಿ 2021ರ ಮಾರ್ಚ್ವರೆಗೆ ಜಾರಿಯ ಲ್ಲಿರುತ್ತದೆ. ಆದಾಯ ಐಟಿ ರಿಟರ್ನ್ ಸಲ್ಲಿಸುವವರಿಗೆ ನವೆಂಬರ್ 30ರವರೆಗೆ ಅವಧಿ ವಿಸ್ತರಿಸಲಾಗಿದೆ. ತೆರಿಗೆ ಪಾವತಿದಾರರಿಗೆ ಬಾಕಿಯಿರುವ ಆದಾಯ ತೆರಿಗೆ 18 ಸಾವಿರ ಕೋಟಿ ರೂಪಾಯಿಯನ್ನು ಆದಾಯ ತೆರಿಗೆ ಇಲಾಖೆ ವಾಪಸ್ ನೀಡಿದೆ. ಇದರಿಂದ 14 ಕೋಟಿ ಆದಾಯ ತೆರಿಗೆದಾರರಿಗೆ ಅನುಕೂಲ ವಾದಂತಾಗಿದೆ. ಆದಾಯ ತೆರಿಗೆ ಪಾವತಿ ದಿನಾಂಕ ಜೂನ್ ಅಂತ್ಯದವರೆಗೂ ವಿಸ್ತರಣೆ ಮಾಡಲಾಗಿದೆ. ವಿವಾದ್ಸೆ ವಿಶ್ವಾಸ್ (ತೆರಿಗೆ ವಿವಾದ ಬಗೆಹರಿಸುವ ಸಂಬಂಧಿತ ಯೋಜನೆ) ಡಿಸೆಂಬರ್ ಅಂತ್ಯದವರೆಗೆ ವಿಸ್ತರಣೆ ಮಾಡಲಾಗಿದೆ.
ಇಪಿಎಫ್ ನೆರವು
ಕೇಂದ್ರ ಸರಕಾರವು ವ್ಯಾಪಾರಿಗಳು, ಕಾರ್ಮಿಕರಿಗೆ ಇಪಿಎಫ್ ನೆರವು ನೀಡಲಿದೆ. 15 ಸಾವಿರ ರೂಪಾಯಿ ಒಳಗೆ ಸಂಬಳ ತೆಗೆದುಕೊಳ್ಳುವ ಉದ್ಯೋಗಿಗಳಿಗೆ ಕೂಡಲೇ ಇಪಿಎಫ್ ಪಾವತಿ ಮಾಡಲಾಗುವುದು ಎಂದು ತಿಳಿಸಿದರು. ಉದ್ಯೋಗದಾತರ ಪಿಎಫ್ ಪಾಲು ಶೇ. 12 ರಿಂದ ಶೇ.10ಕ್ಕೆ ಇಳಿಕೆ ಮಾಡಲಾಗಿದೆ. 6,750 ಕೋಟಿ ರೂ. ಹಣವನ್ನು ಕೇಂದ್ರ ಸರ್ಕಾರವೇ ಭರಿಸಲಿದೆ. ಮತ್ತೆ 3 ತಿಂಗಳ ಕಾಲ ಅಂದರೆ ಜೂನ್, ಜುಲೈ, ಆಗಸ್ಟ್ ತಿಂಗಳವರೆಗೆ ಸರ್ಕಾರವೇ ಪಿಎಫ್ ಹಣವನ್ನು ಪಾವತಿ ಮಾಡಲಿದೆ.
(ಮೊದಲ ಪುಟದಿಂದ) 2,500 ಕೋಟಿ ಲಿಕ್ವಿಡಿಟಿ ಪ್ರೋತ್ಸಾಹದೊಂದಿಗೆ 72.22 ಲಕ್ಷ ಉದ್ಯೋಗಿಗಳು ಈ ಇಪಿಎಫ್ ಅನುಕೂಲ ಪಡೆಯಲಿದ್ದಾರೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ಬ್ಯಾಂಕೇತರ ಸಂಸ್ಥೆಗಳಿಗೆ ನೆರವು
ಮೈಕ್ರೋ ಫೈನಾನ್ಸ್ ಸೇರಿದಂತೆ ಬ್ಯಾಂಕೇತರ ಹಣ ಕಾಸು ಸಂಸ್ಥೆಗಳಿಗೂ 30 ಸಾವಿರ ಕೋಟಿ ರೂ. ನೆರವು ನೀಡಿಕೆ. ಸಹಕಾರಿ ಸಂಸ್ಥೆಗಳೂ ಸೇರಿದಂತೆ ಸಣ್ಣ ಸಾಲ ನೀಡುವ ಬ್ಯಾಂಕೇತರ ಹಣಕಾಸು ಸಂಸ್ಥೆಗಳು, ಗೃಹ ಸಾಲ ನೀಡುವ ಸಂಸ್ಥೆಗಳು ಹಾಗೂ ಸಣ್ಣ ಸಾಲ ನೀಡುವ ಸಂಸ್ಥೆಗಳಿಗೆ ಕೇಂದ್ರ ಸರ್ಕಾರ ಈ ನೆರವು ನೀಡಲಿದೆ. ಕೇಂದ್ರ ಸರ್ಕಾರವೇ ಗ್ಯಾರಂಟಿ ನೀಡಲಿದೆ ಎಂದು ನಿರ್ಮಲಾ ಸೀತಾರಾಮನ್ ಭರವಸೆ ನೀಡಿದ್ದಾರೆ.
ಗುತ್ತಿಗೆದಾರರಿಗೆ ನೆರವು
ರೂ. 200 ಕೋಟಿ ಮೊತ್ತದವರೆಗಿನÀ ಟೆಂಡರ್ಗಳಿಗೆ ಜಾಗತಿಕ ಟೆಂಡರ್ ಇಲ್ಲ. ವಿದೇಶಿ ಕಂಪನಿಗಳಿಗೆ ಟೆಂಡರ್ನಲ್ಲಿ ಅವಕಾಶ ಇಲ್ಲ. ಇನ್ನು ಮುಂದೆ ಸೇವಾ ವಲಯ ಮತ್ತು ಉತ್ಪಾದನಾ ವಲಯ ಎರಡೂ ಒಂದೇ ಆಗಲಿವೆ. ಇದರಿಂದ ಭಾರತೀಯ ಗುತ್ತಿಗೆದಾರರಿಗೆ ತಂಬಾ ಅನುಕೂಲವಾಗಲಿದೆ. ಅಲ್ಲದೆ ಸರಕಾರಿ ಗುತ್ತಿಗೆದಾರರಿಗೂ ಸಚಿವರು ರಿಲೀಫ್ ನೀಡಿದ್ದಾರೆ. ಬಾಕಿ ಉಳಿಸಿಕೊಂಡಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಲು 6 ತಿಂಗಳ ಹೆಚ್ಚುವರಿ ಕಾಲಾವಕಾಶ ನೀಡಲಾಗಿದೆ. ಹಂತ ಹಂತವಾಗಿ ಕಾಮಗಾರಿ ಮುಗಿದ ಕೂಡಲೇ ಗುತ್ತಿಗೆದಾರರು ಬ್ಯಾಂಕ್ ಗ್ಯಾರಂಟಿ ವಾಪಸ್ ನೀಡಬೇಕು ಎಂದು ಹೇಳಿದ್ದಾರೆ.
ವಿದ್ಯುತ್ ಕಂಪೆÀನಿಗಳಿಗೆ ಸಹಾಯ
ಕೊರೊನಾ ವೈರಸ್ ಲಾಕ್ ಡೌನ್ ಪರಿಣಾಮವಾಗಿ ವಿದ್ಯುತ್ ಸರಬರಾಜು ಕಂಪೆನಿಗಳು ಭಾರೀ ಸಂಕಷ್ಟಕ್ಕೆ ಸಿಲುಕಿವೆ. ಹೀಗಾಗಿ ವಿದ್ಯುತ್ ಸರಬರಾಜು ಕಂಪನಿಗಳಿಗೆಂದೇ 90 ಸಾವಿರ ಕೋಟಿ ರೂಪಾಯಿ ಮೀಸಲಿಡಲಾಗಿದೆ. ಇದರಿಂದ ಈ ಕಂಪನಿಗಳ ನಷ್ಟವನ್ನು ಭರಿಸಲಾಗುವದು. ಅಂತಿಮವಾಗಿ ಗ್ರಾಹಕರಿಗೇ ಇದರ ಪ್ರಯೋಜನ ಲಭಿಸುತ್ತದೆ ಎಂದಿದ್ದಾರೆ.
ರಿಯಲ್ ಎಸ್ಟೇಟ್ಗೂ ಉತ್ತೇಜನ
ಕೊರೊನಾವನ್ನು ನೈಸರ್ಗಿಕ ವಿಕೋಪ ಎಂದು ಪರಿಗಣಿಸಿ ರಿಯಲ್ಎಸ್ಟೇಟ್ ಉದ್ಯಮಕ್ಕೂ ಕೇಂದ್ರ ಸರಕಾರ ರಿಲೀಫ್ ನೀಡಿದೆ. ಕೇಂದ್ರ ನಗರಾಭಿವೃದ್ಧಿ ಇಲಾಖೆಯಿಂದ ಎಲ್ಲ ರಾಜ್ಯಗಳಿಗೂ ಸೂಚನೆ ನೀಡಲಾಗಿದೆ. ಕಳೆದ ಮಾರ್ಚ್ 24 ಕ್ಕೆ ಪೂರ್ಣಗೊಳ್ಳದ ಆಸ್ತಿ ನೊಂದಾವಣಾ ಪ್ರಕ್ರಿಯೆಗಳನ್ನು ಹೊಸ ಯೋಜನೆಯಾಗಿ ಪರಗಣಿಸಲು ಅವಕಾಶ ಕಲ್ಪಿಸುವದರೊಂದಿಗೆ ತಾ. 31-3-2021 ರವರೆಗೂ ನೊಂದಾವಣಾ ಪ್ರಕ್ರಿಯೆ ಮುಂದುವರಿಸಲು ಕಾಲಾವಕಾಶ ಕಲ್ಪಿಸಲಾಗಿದೆ. ಆದರೆ ರಿಯಲ್ ಎಸ್ಟೇಟ್ ಉದ್ಯಮಿಗಳು ಸ್ವಯಂ ಪ್ರೇರಿತರಾಗಿ ಸಂಬಂಧಿಸಿದ ಅಧಿಕಾರಿಗಳಿಗೆÀ ಅರ್ಜಿ ಸಲ್ಲಿಸಿ ಈ ಸೌಲಭ್ಯವನ್ನು ಸದುಪಯೋಗಗೊಳಿಸಿಕೊಳ್ಳುವಂತೆ ಸಚಿವರು ಸಲಹೆಯಿತ್ತಿದ್ದಾರೆ.
ಉಚಿತ ಅಕ್ಕಿ ವಿತರಣೆ
ಮುಂದಿನ ಮೂರು ತಿಂಗಳ ಕಾಲ 8 ಕೋಟಿ ಬಡ ಕುಟುಂಬಗಳಿಗೆ ಉಚಿತ ಅಡುಗೆ ಅನಿಲ ನೀಡುವುದಾಗಿಯೂ ಸರ್ಕಾರ ಘೋಷಣೆ ಮಾಡಿದೆ. ಅಲ್ಲದೆ, ಎಲ್ಲ ಕುಟುಂಬದವರಿಗೆ ಮೂರು ತಿಂಗಳ ಕಾಲ ಒಂದು ಕೆಜಿ ಧವಸ-ಧಾನ್ಯ ಹಾಗೂ ಈ ಹಿಂದಿನಂತೆ ಅಕ್ಕಿ ಅಥವ ಗೋದಿಯನ್ನುü ಉಚಿತವಾಗಿ ನೀಡುವುದಾಗಿ ಸರ್ಕಾರ ತಿಳಿಸಿದೆ. ಜನ ಧನ ಖಾತೆ ಹೊಂದಿರುವ ಮಹಿಳೆಯರಿಗೆ ತಿಂಗಳಿಗೆ 500 ರೂಪಾಯಿಯಂತೆ ಮುಂದಿನ ಮೂರು ತಿಂಗಳು ಹಣ ಜಮಾ ಆಗಲಿದೆ ಎಂದಿದ್ದಾರೆ.
ಇದರೊಂದಿಗೆ ತುರ್ತು ಆರೋಗ್ಯ ನಿಧಿಗೆ ರೂ. 15 ಸಾವಿರ ಕೋಟಿ ಮೀಸಲಿಡಲಾಗಿದೆ.