ಸುಂಟಿಕೊಪ್ಪ, ಮೇ 6: ಸುಂಟಿಕೊಪ್ಪ ಹೋಬಳಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ನೆಲೆಸಿದ್ದ ಹೊರಜಿಲ್ಲೆಯ ವಲಸೆ ಕಾರ್ಮಿಕರನ್ನು ಸರಕಾರಿ ಬಸ್ಗಳ ಮೂಲಕ ಸ್ವಂತ ಊರುಗಳಿಗೆ ಕಳುಹಿಸಿಕೊಡಲಾಯಿತು.
ಲಾಕ್ಡೌನ್ ಸಡಿಲಿಕೆ ಮಾಡಲಾಗಿದ್ದು ಸುಂಟಿಕೊಪ್ಪ ಹಾಗೂ ಸುತ್ತ ಮುತ್ತಲಿನ ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಕೂಲಿ ಕೆಲಸಕ್ಕೆ ಆಗಮಿಸಿ ನೆಲೆಸಿದ್ದ ಕಾರ್ಮಿಕರನ್ನು ತಾ. 5 ರಂದು ಕಳಿಸುವ ಉದ್ದೇಶದಿಂದ ಸುಂಟಿಕೊಪ್ಪ ದಿಂದ ಮಂಗಳವಾರ ಮಧ್ಯಾಹ್ನ ಬಸ್ ಮೂಲಕ 27 ಮಂದಿಯನ್ನು ಚಾಮರಾಜನಗರ ಮತ್ತು ಕೊಳ್ಳೆಗಾಲ ಜಿಲ್ಲೆಗೆ ಕಳುಹಿಸಿಕೊಡಲಾಯಿತು.
ಸಮೀಪದ ಮಂಜಿಕೆರೆ ಚಾಮುಂಡಿ ತೋಟದಲ್ಲಿದ್ದ ಮಕ್ಕಳು ಸೇರಿದಂತೆ 13 ಮಂದಿ, ಸುಂಟಿಕೊಪ್ಪ ದಿಂದ 3 ಮಂದಿ, ಸಮೀಪದ ಕಿರಗಂದೂರು ತೋಟದಿಂದ 10 ಮಂದಿಯನ್ನು ಚಾಮರಾಜನಗರ, ಕೊಳ್ಳೆಗಾಲಕ್ಕೆ ಕಳುಹಿಸಿಕೊಡಲಾಯಿತು.
ಈ ಸಂದರ್ಭ ಎಎಸ್ಐ ಶ್ರೀನಿವಾಸ್, ಪಿಡಿಒ ವೇಣುಗೋಪಾಲ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೋಸ್ ಮೇರಿ ರಾಡ್ರಿಗಸ್, ಸದಸ್ಯೆ ನಾಗರತ್ನ ಸುರೇಶ್, ಸಿಬ್ಬಂದಿ ಪುನೀತ್ ಕುಮಾರ್, ಶ್ರೀನಿವಾಸ್, ಅಂಬೇಡ್ಕರ್ ಸಂಘದ ಅಧ್ಯಕ್ಷ ಎಂ.ಎಸ್. ರವಿ ಇತರರು ಇದ್ದರು.