ಚೆಟ್ಟಳ್ಳಿ, ಏ. 26: ಕೊಡವರ ಬಗ್ಗೆ ಫೇಸ್‍ಬುಕ್‍ನಲ್ಲಿ ಅವಹೇಳನ ಪೆÇೀಸ್ಟ್ ಅನ್ನು ಮಾಡಿದ ಯುವಕನನ್ನು ಪೆÇಲೀಸರು ಬಂಧಿಸಿದ್ದಾರೆ.

ಮರಗೋಡು ಹೊಸ್ಕೇರಿ ನಿವಾಸಿ ಸುಕೇಶ್ ಕೆ. ಬಿ. ಎನ್ನುವ ಯುವಕನು ಜನಾಂಗೀಯ ನಿಂದನೆ ಮಾಡಿ ಪೆÇೀಸ್ಟ್ ಹಾಕಿದನ್ನು ಪ್ರಶ್ನಿಸಿದ ಕೆಲವರು, ಯುವಕನನ್ನು ದೂರವಾಣಿ ಮುಖಾಂತರ ತರಾಟೆಗೆ ತೆಗೆದುಕೊಂಡಿದ್ದರು. ಯುವಕನು ಪರಿಸ್ಥಿತಿ ಕೈಮೀರಿ ಹೋಗುತ್ತಿರುವುದನ್ನು ಅರಿತು ಪೆÇೀಸ್ಟನ್ನು ಅಳಿಸಿ ಮತ್ತೆ ಫೇಸ್ ಬುಕ್ಕಿನಲ್ಲಿ ಕ್ಷಮೆಯನ್ನು ಯಾಚಿಸಿದ್ದನು. ಆದರೆ ಪುನಃ ರಾತ್ರಿ ಹತ್ತುಗಂಟೆಗೆ ಮತ್ತೆ ಕ್ಷಮೆ ಯಾಚಿಸಿದ್ದನ್ನು ಮರೆಮಾಚಿ; ಮತ್ತೆ ಜಾತಿ ನಿಂದನೆಯ ಪೆÇೀಸ್ಟನ್ನು ಹರಿಯಬಿಟ್ಟಿದ್ದ.

ಇದನ್ನು ಮನಗಂಡು ಕೆಲವು ಯುವಕರು ಚೆಟ್ಟಳ್ಳಿಯ ಪುತ್ತರಿರ ಪಪ್ಪು ತಿಮ್ಮಯ್ಯನವರನ್ನು ಸಂಪರ್ಕಿಸಿದರು. ಇಂದು ಕೊಡವ ಸಮಾಜದ ಅಧ್ಯಕ್ಷರನ್ನು ಹಾಗೂ ಮುಖಂಡರುಗಳನ್ನು ಸಂಪರ್ಕಿಸಿ ಚರ್ಚಿಸಿದಾಗ ಅಧ್ಯಕ್ಷರಾದ ಕೆ. ಎಸ್. ದೇವಯ್ಯನವರು ತಮ್ಮ ತಂಡದೊಂದಿಗೆ ಪೆÇಲೀಸ್ ವರಿಷ್ಠಾಧಿಕಾರಿಗಳನ್ನು ಸಂಪರ್ಕಿಸಿ ದೂರು ನೀಡಿದರು. ಪೆÇಲೀಸ್ ವರಿಷ್ಠಾಧಿಕಾರಿಗಳು ಆರೋಪಿ ಯುವಕನ ಮೇಲೆ ಸ್ವಯಂ ಪ್ರೇರಿತ ದೂರು ದಾಖಲಿಸಿ ಇಂದು ತನ್ನ ಸ್ವಗ್ರಾಮವಾದ ಹೊಸ್ಕೇರಿಯ ಬಕ್ಕದಲ್ಲಿ ಬಂಧಿಸಲಾಯಿತು.