ಸೋಮವಾರಪೇಟೆ, ಏ.26: ಸೋಮವಾರಪೇಟೆ ಹಾಗೂ ಶನಿವಾರಸಂತೆ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರಿಗೆ ಇಲ್ಲಿನ ತಾಲೂಕು ಆಸ್ಪತ್ರೆಯಲ್ಲಿ ಕೋವಿಡ್-19 ಸೋಂಕು ತಪಾಸಣೆ ನಡೆಸಲಾಯಿತು.

ಕೊಡಗು ಪ್ರೆಸ್‍ಕ್ಲಬ್ ಮತ್ತು ಜಿಲ್ಲಾ ಪತ್ರಕರ್ತರ ಸಂಘದ ಮನವಿಯ ಮೇರೆಗೆ ಸರ್ಕಾರದಿಂದ ಪತ್ರಕರ್ತರಿಗೆ ಕೋವಿಡ್ ತಪಾಸಣೆ ಆಯೋಜಿಸಲಾಗಿದ್ದು, ಸೋಮವಾರಪೇಟೆಯಲ್ಲಿ 13 ಮಂದಿ ಪತ್ರಕರ್ತರ ಆರೋಗ್ಯ ತಪಾಸಣೆ ನಡೆಯಿತು. ಮಡಿಕೇರಿ ಆಸ್ಪತ್ರೆಯ ವೈದ್ಯರಾದ ಡಾ. ಅಫ್ರೀನ್, ಹಿರಿಯ ಲ್ಯಾಬ್ ಸೂಪರ್‍ವೈಸರ್ ಪುಟ್ಟರಾಜು, ಎಂಡಮಾಲಜಿಸ್ಟ್ ಮಂಜುನಾಥ್ ತಂಡ ತಪಾಸಣೆ ಮಾಡಿತು.

ತಾಲೂಕು ಆರೋಗ್ಯಾಧಿಕಾರಿ ಡಾ. ಶ್ರೀನಿವಾಸ್, ಸರ್ಕಾರಿ ಆಸ್ಪತ್ರೆಯ ಶುಶ್ರೂಷಕಿ ಅನಿತ, ಕಮಲ ಸೇರಿದಂತೆ ಇತರರು ತಪಾಸಣಾ ಶಿಬಿರದಲ್ಲಿ ಸಹಕಾರ ನೀಡಿದರು.