ಮಡಿಕೇರಿ, ಏ. 23: ಕೋಕೇರಿ ಗ್ರಾಮದ ನಾಣಯ್ಯ ಅವರ ನಿವಾಸ ದಲ್ಲಿದ್ದ ನಾಗರ ಹಾವನ್ನು ಅರಣ್ಯ ಇಲಾಖೆಯ ಆರಣ್ಯ ರಕ್ಷಕ ಅರುಣ್ ಸೆರೆಹಿಡಿದು ಸಮೀಪದ ರಕ್ಷಿತಾರಣ್ಯಕ್ಕೆ ಬಿಟ್ಟರು. ಕಾರ್ಯಾಚರಣೆಯಲ್ಲಿ ಉಪ ವಲಯ ಅರಣ್ಯಾಧಿಕಾರಿ ಅಕ್ಕಮ್ಮ, ಶಿವಕುಮಾರ ಹಾಜರಿದ್ದರು.