ದೊಡ್ಡವರು, ಚಿಕ್ಕವರು, ಬಡವರು, ಸಿರಿವಂತರು, ಹೆಂಗಸರು, ಗಂಡಸರು, ಸಣ್ಣ ಮಕ್ಕಳು, ಜಾತಿ-ಧರ್ಮ ಇಂಥಹ ಯಾವದೇ ಬೇಧ-ಭಾವವಿಲ್ಲದೆ ಎಲ್ಲರನ್ನು ಸಮಾನವಾಗಿ ಹೊಕ್ಕು ಹರಡುತ್ತಿರುವ ಕೊರೊನಾ ಮಹಾಮಾರಿ ಈಗ ಎಲ್ಲರಿಗೂ ಚಿರಪರಿಚಿತ. ಮನೆಮಂದಿಯನ್ನು ಒಟ್ಟಿಗೆ ಕೂಡಿಹಾಕಿರುವ ಈ ಸೋಂಕಿನ ಬಗ್ಗೆ ಇನ್ನೂ ಸಾಕಷ್ಟು ತಿಳೆದುಕೊಳ್ಳ ಬೇಕಾದ ವಿಷಯಗಳಿವೆ. ಮುಖ್ಯವಾಗಿ ಇನ್ನೊಂದು ಜೀವವನ್ನು ತನ್ನಲ್ಲಿಟ್ಟುಕೊಂಡು ಪೋಷಿಸುತ್ತಿರುವ ಗರ್ಭಿಣಿಯರು ಹಾಗೂ ಹಸುಗೂಸುಗಳಿಗೆ ಸೋಂಕು ತಗುಲಿದರೆ ಏನು ಮಾಡಬೇಕೆಂಬ ಸಮಸ್ಯೆಗಳು ಕಾಡುತ್ತಿವೆ. ಸೂಕ್ಷ್ಮಘಟ್ಟದಲ್ಲಿರುವ ಈ ಎರಡು ತರಹದ ಜನರಲ್ಲಿ ಸೋಂಕು ತನ್ನ ತೀವ್ರ ಪ್ರಭಾವಗಳನ್ನು ಬೀರುವದು, ಇವರ ಆರೈಕೆಯಲ್ಲಿ ವಿಶೇಷವಾದ ಗಮನಹರಿಸಬೇಕಾಗುತ್ತದೆ.

ಚೀನಾ ಹಾಗೂ ಅಮೇರಿಕಾದಂತ ದೇಶಗಳಲ್ಲಿ ಕೆಲವೊಂದು ಅಧ್ಯಯನಗಳು ಈಗ ಪ್ರಾರಂಭಗೊಂಡಿವೆ. ಗರ್ಭಿಣಿಯರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವದರಿಂದ ಇವರಿಗೆ ಸೋಂಕು ಹರಡುವುದು ಸುಲಭ. ಕೇವಲ ಜ್ವರ, ಕೆಮ್ಮು, ನೆಗಡಿಯ ಸ್ವರೂಪವಲ್ಲದೆ ಉಸಿರಾಟದ ತೊಂದರೆ ಹಾಗೂ ನ್ಯೂಮೋನಿಯಾದಂತಹ ತೊಡಕುಗಳಾಗುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ತಿಳಿದುಬಂದಿದೆ.

ನವಜಾತ ಶಿಶುಗಳೂ ಸಹ ರೋಗ ನಿರೋಧಕ ಶಕ್ತಿ ಪಡೆಯಲು ತಾಯಿಯಿಂದ ದೊರಕುವ ಎದೆಹಾಲನ್ನೇ ಅವಲಂಭಿಸಿರುತ್ತವೆ. ಆದ್ದರಿಂದ ಅವು ಕೂಡ ಈ ಸೋಂಕಿಗೆ ಸುಲಭವಾಗಿ ತುತ್ತಾಗಬಹುದು. ಗರ್ಭಾವಸ್ಥೆಯ ಮೊದಲ ಮೂರು ತಿಂಗಳಲ್ಲಿ ಮಗುವಿನ ಮುಖ್ಯ ಅಂಗಗಳಾದ ಮೆದುಳು, ಹೃದಯ, ಪಿತ್ತಜನಕಾಂಗ, ಮೂತ್ರಪಿಂಡ ಇವುಗಳ ಸಾಮಾನ್ಯ ಬೆಳವಣಿಗೆಯ ಮೇಲೆ ಯಾವ ಪರಿಣಾಮ ಬೀರಬಹುದು ಎಂಬವುದರ ಬಗ್ಗೆ ಅಧ್ಯಯನಗಳು ನಡೆಯುತ್ತಿವೆ. ಗರ್ಭಾವಸ್ಥೆಯ ಕೊನೆಯ ಮೂರು ತಿಂಗಳುಗಳಲ್ಲಿ ಸೋಂಕು ತಗುಲಿದಾಗ ಸಮಯಕ್ಕೆ ಮುಂಚೆಯೇ ಹೆರಿಗೆ ಆಗುವಿಕೆ (Pಡಿeಣeಡಿoಟಿ ಆeಟiveಡಿಥಿ) ಸಾಧ್ಯತೆಗಳು ಸಹ ಇರುತ್ತವೆ. ಆದರೆ ಈ ನಿಗದಿ ಪೂರ್ವ ಅಕಾಲಿಕ ಹೆರಿಗೆ ತಾಯಿಗೆ ಸೋಂಕು ತಗುಲಿದ್ದರಿಂದಲೇ ಆದದ್ದು ಎನ್ನುವದಕ್ಕೆ ಸಾಕಷ್ಟು ಪುರಾವೆಗಳು ಒದಗಿಲ್ಲ. ಚೀನಾದ ವುಹಾನ್ ನಗರದಲ್ಲಿ ಸೋಂಕಿತ ಗರ್ಭಿಣಿಯರಲ್ಲಿ ಅಕಾಲಿಕ ಹೆರಿಗೆಗಳು ಹೆಚ್ಚಾಗಿದ್ದವು. ಸೋಂಕು ಮಗುವಿಗೆ ತಾಯಿಯಿಂದ ಹರಡಬಾರದೆಂದು ವೈದ್ಯರೇ ಅವಧಿಗೆ ಮುನ್ನ ಹೆರಿಗೆ ಮಾಡಿಸಿದಂತ ದೊಡ್ಡವರು, ಚಿಕ್ಕವರು, ಬಡವರು, ಸಿರಿವಂತರು, ಹೆಂಗಸರು, ಗಂಡಸರು, ಸಣ್ಣ ಮಕ್ಕಳು, ಜಾತಿ-ಧರ್ಮ ಇಂಥಹ ಯಾವದೇ ಬೇಧ-ಭಾವವಿಲ್ಲದೆ ಎಲ್ಲರನ್ನು ಸಮಾನವಾಗಿ ಹೊಕ್ಕು ಹರಡುತ್ತಿರುವ ಕೊರೊನಾ ಮಹಾಮಾರಿ ಈಗ ಎಲ್ಲರಿಗೂ ಚಿರಪರಿಚಿತ. ಮನೆಮಂದಿಯನ್ನು ಒಟ್ಟಿಗೆ ಕೂಡಿಹಾಕಿರುವ ಈ ಸೋಂಕಿನ ಬಗ್ಗೆ ಇನ್ನೂ ಸಾಕಷ್ಟು ತಿಳೆದುಕೊಳ್ಳ ಬೇಕಾದ ವಿಷಯಗಳಿವೆ. ಮುಖ್ಯವಾಗಿ ಇನ್ನೊಂದು ಜೀವವನ್ನು ತನ್ನಲ್ಲಿಟ್ಟುಕೊಂಡು ಪೋಷಿಸುತ್ತಿರುವ ಗರ್ಭಿಣಿಯರು ಹಾಗೂ ಹಸುಗೂಸುಗಳಿಗೆ ಸೋಂಕು ತಗುಲಿದರೆ ಏನು ಮಾಡಬೇಕೆಂಬ ಸಮಸ್ಯೆಗಳು ಕಾಡುತ್ತಿವೆ. ಸೂಕ್ಷ್ಮಘಟ್ಟದಲ್ಲಿರುವ ಈ ಎರಡು ತರಹದ ಜನರಲ್ಲಿ ಸೋಂಕು ತನ್ನ ತೀವ್ರ ಪ್ರಭಾವಗಳನ್ನು ಬೀರುವದು, ಇವರ ಆರೈಕೆಯಲ್ಲಿ ವಿಶೇಷವಾದ ಗಮನಹರಿಸಬೇಕಾಗುತ್ತದೆ.

ಚೀನಾ ಹಾಗೂ ಅಮೇರಿಕಾದಂತ ದೇಶಗಳಲ್ಲಿ ಕೆಲವೊಂದು ಅಧ್ಯಯನಗಳು ಈಗ ಪ್ರಾರಂಭಗೊಂಡಿವೆ. ಗರ್ಭಿಣಿಯರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವದರಿಂದ ಇವರಿಗೆ ಸೋಂಕು ಹರಡುವುದು ಸುಲಭ. ಕೇವಲ ಜ್ವರ, ಕೆಮ್ಮು, ನೆಗಡಿಯ ಸ್ವರೂಪವಲ್ಲದೆ ಉಸಿರಾಟದ ತೊಂದರೆ ಹಾಗೂ ನ್ಯೂಮೋನಿಯಾದಂತಹ ತೊಡಕುಗಳಾಗುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ತಿಳಿದುಬಂದಿದೆ.

ನವಜಾತ ಶಿಶುಗಳೂ ಸಹ ರೋಗ ನಿರೋಧಕ ಶಕ್ತಿ ಪಡೆಯಲು ತಾಯಿಯಿಂದ ದೊರಕುವ ಎದೆಹಾಲನ್ನೇ ಅವಲಂಭಿಸಿರುತ್ತವೆ. ಆದ್ದರಿಂದ ಅವು ಕೂಡ ಈ ಸೋಂಕಿಗೆ ಸುಲಭವಾಗಿ ತುತ್ತಾಗಬಹುದು. ಗರ್ಭಾವಸ್ಥೆಯ ಮೊದಲ ಮೂರು ತಿಂಗಳಲ್ಲಿ ಮಗುವಿನ ಮುಖ್ಯ ಅಂಗಗಳಾದ ಮೆದುಳು, ಹೃದಯ, ಪಿತ್ತಜನಕಾಂಗ, ಮೂತ್ರಪಿಂಡ ಇವುಗಳ ಸಾಮಾನ್ಯ ಬೆಳವಣಿಗೆಯ ಮೇಲೆ ಯಾವ ಪರಿಣಾಮ ಬೀರಬಹುದು ಎಂಬವುದರ ಬಗ್ಗೆ ಅಧ್ಯಯನಗಳು ನಡೆಯುತ್ತಿವೆ. ಗರ್ಭಾವಸ್ಥೆಯ ಕೊನೆಯ ಮೂರು ತಿಂಗಳುಗಳಲ್ಲಿ ಸೋಂಕು ತಗುಲಿದಾಗ ಸಮಯಕ್ಕೆ ಮುಂಚೆಯೇ ಹೆರಿಗೆ ಆಗುವಿಕೆ (Pಡಿeಣeಡಿoಟಿ ಆeಟiveಡಿಥಿ) ಸಾಧ್ಯತೆಗಳು ಸಹ ಇರುತ್ತವೆ. ಆದರೆ ಈ ನಿಗದಿ ಪೂರ್ವ ಅಕಾಲಿಕ ಹೆರಿಗೆ ತಾಯಿಗೆ ಸೋಂಕು ತಗುಲಿದ್ದರಿಂದಲೇ ಆದದ್ದು ಎನ್ನುವದಕ್ಕೆ ಸಾಕಷ್ಟು ಪುರಾವೆಗಳು ಒದಗಿಲ್ಲ. ಚೀನಾದ ವುಹಾನ್ ನಗರದಲ್ಲಿ ಸೋಂಕಿತ ಗರ್ಭಿಣಿಯರಲ್ಲಿ ಅಕಾಲಿಕ ಹೆರಿಗೆಗಳು ಹೆಚ್ಚಾಗಿದ್ದವು. ಸೋಂಕು ಮಗುವಿಗೆ ತಾಯಿಯಿಂದ ಹರಡಬಾರದೆಂದು ವೈದ್ಯರೇ ಅವಧಿಗೆ ಮುನ್ನ ಹೆರಿಗೆ ಮಾಡಿಸಿದಂತ ಎದೆಹಾಲಿನಲ್ಲಿ ವೈರಾಣುಗಳಿದ್ದು, ಮಗುವಿಗೆ ಸೋಂಕು ಬರಬಹುದೇ ಎಂಬ ವಿಷಯದ ಬಗ್ಗೆ ಸಂಶೋಧನೆಗಳು ನಡೆಯುತ್ತಿವೆ ತಾಯಿಯ ಹಾಲಿಗೆ ಪರ್ಯಾಯ ಆಹಾರ ಯಾವದೂ ಶಿಶುವಿಗೆ ಸಂಪೂರ್ಣ ಪೋಷಣೆ ನೀಡಲು ಸಾಧ್ಯವಿಲ್ಲ. ತಾಯಿಯ ಹಾಲು ಮಗುವಿಗೆ ಮೊದಲ ರೋಗನಿರೋಧಕ ಶಕ್ತಿಯನ್ನು ಕೊಡುತ್ತದೆ ಎಂಬದು ಖಚಿತವಾದ ವಿಷಯ ಆದ್ದರಿಂದ ಭಾರತ ಸೇರಿದಂತೆ ಕೆಲವು ದೇಶಗಳಲ್ಲಿ ಶಿಶುವಿಗೆ ತಾಯಿಯ ಹಾಲುಣಿಸುವುದನ್ನು ಅನುವು ಮಾಡಿಕೊಡಲಾಗುತ್ತಿದೆ ತಾಯಿಯ ಎದೆಹಾಲನ್ನು ತೆಗೆದು ಒಳ್ಳೆಯ ನಿಪ್ಪಲ್ ಮೂಲಕ ಉಣಿಸುವ ಪ್ರಯತ್ನಗಳೂ ಇವೆ.

ವಹಿಸಬೇಕಾದ ಎಚ್ಚರಗಳು

v ಕೊರೊನಾ ಸೋಂಕಿತ ತಾಯಿ ಹಾಲುಣಿಸುವ ಮುನ್ನ ತನ್ನ ಕೈಗಳನ್ನು ಹಾಗೂ ಎದೆಯ ಭಾಗವನ್ನು ನೀರಿನಲ್ಲಿ ಚೆನ್ನಾಗಿ ಶುಚಿಗೊಳಿಸಬೇಕು.

v ಎದೆಯಲ್ಲಿ ಬಿರುಕು, ಬೇನೆ ಇದ್ದರೆ ಹಾಲುಣಿಸಬಾರದು.

v ಹಾಲುಣಿಸುವ ಸಮಯದಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಲೇಬೇಕು.

v ತಾಯಿಯ ಹಾಲನ್ನು ಬ್ರೆಸ್ಟ್ ಪಂಪ್‍ನಲ್ಲಿ ಹೊರ ತೆಗೆಯುತ್ತಿದ್ದರೆ ಅದನ್ನು ಮುಟ್ಟುವ ಮೊದಲು ಕೈತೊಳೆಯಬೇಕು. ಪಂಪ್ ಬಳಸಿದ ನಂತರ ಅದನ್ನು ಶುಚಿಗೊಳಿಸಬೇಕು. ಹೀಗೆ ತೆಗೆದ ಹಾಲನ್ನು ಸಾಧ್ಯವಾದರೆ ಬೇರೆ ವ್ಯಕ್ತಿ ನಿಪ್ಪಲ್ ಮೂಲಕ ಮಗುವಿಗೆ ನೀಡಬೇಕು.

v ಮಗುವನ್ನು ಪದೇ ಪದೇ ಮುಟ್ಟಬಾರದು. ಹಾಲುಣಿಸುವ ಸಮಯದಲ್ಲಿ ಮಾತ್ರ ಎಚ್ಚರಿಕೆಯಿಂದ ಮುಟ್ಟಬೇಕು.

v ತಾಯಿಗೆ ಅತಿಯಾದ ಉಸಿರಾಟದ ತೊಂದರೆ ಅಥವಾ ನ್ಯೂಮೊನಿಯಾ ಇದ್ದರೆ ಸಂಪೂರ್ಣವಾಗಿ ಎದೆಹಾಲು ನಿಷೇದಿಸಬೇಕು. ಬೇರೆ ಆರೋಗ್ಯವಂತ ತಾಯಿಯ ಎದೆಹಾಲು ದೊರಕುವ ವ್ಯವಸ್ಥೆ ಇದ್ದರೆ ಉತ್ತಮ.

v ನವಜಾತ ಮಕ್ಕಳಲ್ಲಿ ಹಾಗೂ ತಾಯಂದಿರಲ್ಲಿ ಈ ಸೋಂಕು ಸಾಕಷ್ಟು ತೊಂದರೆಗಳನ್ನು ತರುವ ಸಾಧ್ಯತೆ ಇರುವದ ರಿಂದ ಎಚ್ಚರಿಕೆಯಿಂದ ನಿಗಾವಹಿಸಿದರೆ ಹೆದರುವ ಅವಶ್ಯಕತೆ ಬರುವದಿಲ್ಲ.

-ಡಾ|| ಶಿಲ್ಪ ಸತೀಶ್,

ಕೂರ್ಗ್‍ಪಾಥ್ ಕೇರ್, ಮಹದೇವಪೇಟೆ,

ಮಡಿಕೇರಿ.