ಪರೀಕ್ಷೆ ಎನ್ನುವುದು ಬಹುಪಾಲು ವಿದ್ಯಾರ್ಥಿಗಳಿಗೆ ಶಿಕ್ಷೆ. ಕೆಲವರಿಗೆ ಜೀವನದ ಕೈದೀವಿಗೆ. ಇದರಲ್ಲಿ ಗಳಿಸಿದ ಅಂಕಗಳ ಮೇಲೆಯೇ ಹಲವರ ಭವಿಷ್ಯವು ನಿರ್ಧಾರವಾಗುತ್ತದೆ. ಈ ವಿಚಾರ ವಿದ್ಯಾರ್ಥಿಗಳಿಗೆ ಶಿಕ್ಷಕರಿಗೆ ಪ್ರಮುಖ ಎನಿಸದಿದ್ದರೂ, ಪ್ರತೀ ಪೋಷಕರ ಪಾಲಿಗೆ ಇದೇ ಪ್ರಮುಖ ಅಳತೆಗೋಲು.
ಆದರೆ, ಬಹುತೇಕ ಶಿಕ್ಷಕರಿಗೆ ವಿದ್ಯಾರ್ಥಿಯ ಅಧಿಕ ಅಂಕ ಗಳಿಕೆ, ಅಥವಾ ಸಂಸ್ಥೆಯ ಶೇಕಡವಾರು ಫಲಿತಾಂಶವೇ ತಮ್ಮ ಹೊಟ್ಟೆಪಾಡಿಗೆ ಶ್ರೀರಕ್ಷೆ ! ಇದನ್ನು ಉಳಿಸಿಕೊಳ್ಳಲು ಪ್ರತೀ ವರ್ಷವೂ ಕಲಿಕೆಯಲ್ಲಿ ವಿನೂತನ ತಂತ್ರದ ಮೊರೆ ಹೋಗಬೇಕಾಗಿರುವುದು ಅನಿವಾರ್ಯ. ಇಲ್ಲದಿದ್ದರೆ, ತುತ್ತು ಅನ್ನಕ್ಕೂ ಯಾ ಉದ್ಯೋಗಕ್ಕೂ ಕಲ್ಲು ಬೀಳುವ ಸಾಧ್ಯತೆಗಳೇ ಅಧಿಕ. ಇದನ್ನೆಲ್ಲ ಅರಿತ ಶಿಕ್ಷಕರು ಶೈಕ್ಷಣಿಕ ವರ್ಷದಾರಂಭದಿಂದಲೇ ಹಿಂದಿನ ವರ್ಷಕ್ಕಿಂತ ವಿಭಿನ್ನ ರೀತಿಯನ್ನು ಅನುಸರಿಸುತ್ತಾರೆ.
ತಾವು ಕಲಿಸುತ್ತಿರುವ ವಿಷಯದಲ್ಲಿ ಅಧಿಕ ಸಂಖ್ಯೆಯ ವಿದ್ಯಾರ್ಥಿಗಳು ಉತ್ತೀರ್ಣರಾಗಬೇಕು. ಅವರ ಶೇಕಡವಾರು ಹೆಚ್ಚಿರಬೇಕು ಎಂಬುದು ಪ್ರೌಢಶಾಲೆಯಿಂದ ಕಾಲೇಜು ಮಟ್ಟದವರೆಗಿನ ಅಧ್ಯಾಪಕ ವೃಂದದವರಿಗೆ ಅಲಿಖಿತ ಷರತ್ತು. ಇದಕ್ಕಾಗಿ ಅನುಭವಿ ಶಿಕ್ಷಕರು ತಮ್ಮದೇ ಆದ ಕಲಿಕಾ ವಿಧಾನಗಳನ್ನು ಕಂಡುಕೊಂಡಿರುತ್ತಾರೆ. ಶಿಕ್ಷಕ ವೃತ್ತಿಯ ತರಬೇತಿ ಪಡೆದವರು ಈ ವಿಚಾರವನ್ನು ಅರಿತಿರುತ್ತಾರೆ. ಆದರೆ, ಎಲ್ಲರೂ ಅದರಲ್ಲಿ ಪ್ರಾವೀಣ್ಯತೆ ಪಡೆದಿರುವುದಿಲ್ಲ. ಹೊಸದಾಗಿ ಶಿಕ್ಷಕ ವೃತ್ತಿಗೆ ಆಗಮಿಸಿದವ ರನ್ನು ಈ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ.
v
v
v
v ಪ್ರತೀ ಪಾಠ-ಅಧ್ಯಾಯ ಮುಗಿದ ಕೂಡಲೇ ಅದಕ್ಕೆ ಸಂಬಂಧಿತ ಪರೀಕ್ಷೆ ಮಾಡಿಸಬೇಕು.
v ಹಿಂದಿನ ದಿನದ ಪಾಠವನ್ನು ಮಾರನೇ ದಿನದ ಆರಂಭದಲ್ಲಿ ಸಂಕ್ಷಿಪ್ತವಾಗಿ ವಿವರಿಸಿ. ಬಳಿಕ ಮುಂದುವರಿಯಿರಿ. ಇದರಿಂದ ಗೈರು ಹಾಜರಾದ ವಿದ್ಯಾರ್ಥಿಗಳಿಗೆ, ವಿಷಯ ಅರೆಬರೆ ಅರ್ಥವಾದವರಿಗೆ ಅನುಕೂಲವಾಗಲಿದೆ.
v ಪ್ರತೀ ವಿದ್ಯಾರ್ಥಿಯ ಅಕ್ಷರ ಲೋಪ, ವ್ಯಾಕರಣ ದೋಷಗಳ ಬಗ್ಗೆಯೂ ಗಮನಹರಿಸಿ.
v
v
v
v
v
v
v
v
v
v
ಪ್ರತೀ ಶಿಕ್ಷಕರೂ ವಿದ್ಯಾರ್ಥಿಯ ಜೀವನದ ಮೇಲೆ ಗಾಡ ಪ್ರಭಾವ ಬೀರುವಂತಹವರಾಗಲು, ಚಿರಸ್ಮರಣೀಯ ರಾಗಲು ಶ್ರಮಿಸಿ. ಮಾಜಿ ರಾಷ್ಟ್ರಪತಿ ಡಾ. ರಾಧಾಕೃಷ್ಣನ್ ಅವರನ್ನು ಅನುಕರಿಸಿ.
-ಕೂಡಂಡ ರವಿ, ಹೊದ್ದೂರು.