ಮಡಿಕೇರಿ, ಜ. 6: ಘನ ತ್ಯಾಜ್ಯ ನಿರ್ವಹಣೆ ಕುರಿತು ತರಬೇತಿ ಕಾರ್ಯಾಗಾರವು ತಾ. 7ರಂದು (ಇಂದು) ಮತ್ತು 8 ರಂದು ಜಿ.ಪಂ.ನೂತನ ಸಭಾಂಗಣದಲ್ಲಿ ನಡೆಯಲಿದೆ.
ತಾ. 7ರಂದು (ಇಂದು) ಬೆಳಿಗ್ಗೆ 10.15 ಗಂಟೆಗೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಜಿ.ಪಂ. ಸಿಇಒ ಕೆ.ಲಕ್ಷ್ಮೀಪ್ರಿಯಾ, ಉಪ ಕಾರ್ಯದರ್ಶಿ ಗುಡೂರು ಭೀಮಸೇನ, ಹಸಿರು ದಳದ ನಳಿನಿ ಶೇಖರ್ ಇತರರು ಪಾಲ್ಗೊಳ್ಳಲಿದ್ದಾರೆ. ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಗ್ರಾಮ ಪಂಚಾಯತ್ ಅಧ್ಯಕ್ಷರೊಂದಿಗೆ ಕಾರ್ಯಗಾರ ನಡೆಯಲಿದೆ.
ಬ್ಯಾಚ್-1 ಕ್ಕೆ ಜಿಲ್ಲಾ ಪಂಚಾಯತ್ ತಾ. 7ರಂದು (ಇಂದು) ಬೆಳಿಗ್ಗೆ 10.30 ಗಂಟೆಗೆ, ಬ್ಯಾಚ್-2 ಕ್ಕೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ತಾ. 8 ರಂದು ಬೆಳಿಗ್ಗೆ 10.30 ಗಂಟೆಗೆ ನಡೆಯಲಿದೆ.
ಬ್ಯಾಚ್-1 ರ ಗ್ರಾಮ ಪಂಚಾಯಿತಿ ವಿವರ: ಮಡಿಕೇರಿ ತಾಲೂಕಿನ ಐಯ್ಯಂಗೇರಿ, ಬಲ್ಲಮಾವಟಿ, ಬೇಂಗೂರು, ಬೆಟ್ಟಗೇರಿ, ಭಾಗಮಂಡಲ, ಚೆಂಬು, ಗಾಳಿಬೀಡು, ಹಾಕತ್ತೂರು, ಹೊದ್ದೂರು, ಹೊಸ್ಕೇರಿ, ಕಡಗದಾಳು, ಕೆ.ನಿಡುಗಣೆ ಗ್ರಾಮ ಪಂಚಾಯಿತಿ.
ಸೋಮವಾರಪೇಟೆ ತಾಲೂಕಿನ 7ನೇ ಹೊಸಕೋಟೆ, ಐಗೂರು, ಆಲೂರು ಸಿದ್ಧಾಪುರ, ಬೇಳೂರು, ಬೆಸ್ಸೂರು, ಬೆಟ್ಟದಳ್ಳಿ, ಬ್ಯಾಡಗೊಟ್ಟ, ಚೆಟ್ಟಳ್ಳಿ, ಚೌಡ್ಲು, ದೊಡ್ಡಮಳ್ತೆ, ದುಂಡಳ್ಳಿ, ಗಣಗೂರು, ಗರ್ವಾಲೆ, ಗೌಡಳ್ಳಿ, ಗುಡ್ಡೆಹೊಸೂರು, ಹಾನಗಲ್ಲು, ಹಂಡ್ಲಿ, ಹರದೂರು, ಹೆಬ್ಬಾಲೆ, ಕಂಬಿಬಾಣೆ, ಕೆದಕಲ್, ಕಿರಗಂದೂರು, ಕೊಡಗರಳ್ಳಿ ಕೊಡ್ಲಿಪೇಟೆ, ಕೂಡಿಗೆ, ಕೂಡುಮಂಗಳೂರು, ಮಾದಾಪುರ, ಮುಳ್ಳುಸೋಗೆ, ನಾಲ್ಕೂರು ಶಿರಂಗಾಲ, ನಂಜರಾಯಪಟ್ಟಣ, ನೆಲ್ಲಿಹುದಿಕೇರಿ, ನೆರುಗಳಲೆ, ನಿಡ್ತ, ಶನಿವಾರಸಂತೆ, ಶಾಂತಳ್ಳಿ, ಶಿರಂಗಾಳ, ಸುಂಟಿಕೊಪ್ಪ, ತೋಳೂರು ಶೆಟ್ಟಳ್ಳಿ, ತೊರೆನೂರು, ವಾಲ್ನೂರು ತ್ಯಾಗತ್ತೂರು ಗ್ರಾಮ ಪಂಚಾಯಿತಿಗಳು.
ಬ್ಯಾಚ್-2 ರ ಗ್ರಾಮ ಪಂಚಾಯಿತಿ ವಿವರ : ಮಡಿಕೇರಿ ತಾಲೂಕಿನ ಕಾಂತೂರು-ಮೂರ್ನಾಡು, ಕರಿಕೆ, ಕೊಣಂಜಗೇರಿ, ಕುಂದಚೇರಿ, ಕುಂಜಿಲ, ಮದೆ, ಮಕ್ಕಂದೂರು, ಮರಗೋಡು, ಮೇಕೇರಿ, ನಾಪೋಕ್ಲು, ನರಿಯಂದಡ, ಪೆರಾಜೆ, ಸಂಪಾಜೆ, ಎಮ್ಮೆಮಾಡು ಗ್ರಾ.ಪಂ.ಗಳು.
ವೀರಾಜಪೇಟೆ ತಾಲೂಕಿನ ಅಮ್ಮತ್ತಿ, ಆರ್ಜಿ, ಅರುವತ್ತೊಕ್ಲು, ಬಿ.ಶೆಟ್ಟಿಗೇರಿ, ಬಾಳೆಲೆ, ಬಲ್ಯಮುಂಡೂರು, ಬೇಟೋಳಿ, ಬಿಳುಗುಂದ, ಬಿರುನಾಣಿ, ಬಿಟ್ಟಂಗಾಲ, ಚೆಂಬೆ ಬೆಳ್ಳೂರು, ಚೆನ್ನಯ್ಯನಕೋಟೆ, ದೇವರಪುರ, ಗೋಣಿಕೊಪ್ಪ, ಹಾಲುಗುಂದ, ಹಾತೂರು, ಹೊಸೂರು, ಹುದಿಕೇರಿ, ಕೆ. ಬಾಡಗ, ಕದನೂರು, ಕಾಕೋಟುಪರಂಬು, ಕಣ್ಣಂಗಾಲ, ಕಾನೂರು, ಕಾರ್ಮಾಡು, ಕೆದಮುಳ್ಳೂರು, ಕಿರುಗೂರು, ಕುಟ್ಟ, ಮಾಲ್ದಾರೆ, ಮಾಯಮುಡಿ, ನಾಲ್ಕೇರಿ, ನಿಟ್ಟೂರು, ಪಾಲಿಬೆಟ್ಟ, ಪೊನ್ನಂಪೇಟೆ, ಪೊನ್ನಪ್ಪಸಂತೆ, ಸಿದ್ದಾಪುರ, ಶ್ರೀಮಂಗಲ, ಟಿ.ಶೆಟ್ಟಿಗೇರಿ, ತಿತಿಮತಿ ಗ್ರಾಮ ಪಂಚಾಯಿತಿಗಳು.