ಹಿರಿಯರು ಮನೆಯ ಲಕ್ಷಣ, ಅವರಿಲ್ಲದ ಮನೆ ಭಣ-ಭಣ,

ನಿಮ್ಮ ಹಿರಿಯರನ್ನು ಈ ಕೆಳಗಿನಂತೆ ಗೌರವಿಸಿರಿ.

v ಅವರ ಮುಂದೆ ಕುಳಿತಾಗ ಫೋನ್‍ಗಳನ್ನು ದೂರವಿಡಿ.

v ಅವರು ಹೇಳುವ ಮಾತುಗಳನ್ನು ಪೂರ್ತಿಯಾಗಿ ಕೇಳಿ, ಮಧ್ಯದಲ್ಲೇ ಎದ್ದು ಹೋಗದಿರಿ.

v ಅವರ ಜೊತೆ ಇರುವಾಗ ಗೌರವದಿಂದ ವ್ಯವಹರಿಸಿ.

v ಕೇವಲ ಸಂತೋಷದ ವಿಷಯ ಮಾತ್ರ ಹಂಚಿಕೊಳ್ಳಿ.

v ದುಃಖದ ವಿಷಯ ಆದಷ್ಟು ಅವರಿಗೆ ಹೇಳದಿರಿ.

v ಅವರಿಗೆ ಇಷ್ಟವಿರುವ ಗೆಳೆಯರ, ಆಪ್ತರ ಬಗ್ಗೆ ಒಳ್ಳೆಯ ಮಾತಾಡಿ.

v ಅವರ ಸಂತೋಷದ ದಿನಗಳ ಬಗ್ಗೆ ನೆನಪಿಸಿ.

v ಅವರು ಹೇಳಿದ್ದನ್ನೇ ಹೇಳುತ್ತಿದ್ದರೆ, ನೀವು ಹೊಸದಾಗಿ ಕೇಳುತ್ತಿರುವ ಹಾಗೆ ಇರಿ.

v ಕಳೆದುಹೋದ ಕಹಿ ವಿಷಯಗಳನ್ನು ನೆನಪಿಸಬೇಡಿ, ಅದನ್ನು ಆದಷ್ಟು ಮರೆಯುವಂತೆ ಮಾಡಿ.

v ಅವರ ಮುಂದೆ ಕುಳಿತಾಗ ಬೇರೆಯವರ ಜೊತೆ ಮಾತಾಡಬೇಡಿ.

v ಅವರ ಮುಂದೆ ಗೌರವಭಾವದಿಂದ ಕುಳಿತುಕೊಳ್ಳಿ.

v ಅವರ ಮಾತನ್ನು ತೆಗಳಬೇಡಿ.

v ಅವರು ಮಾತನಾಡುವಾಗ ಅರ್ಧಕ್ಕೆ ತಡೆಯಬೇಡಿ.

v ಅವರ ವಯಸ್ಸಿಗೆ ಸದಾ ಬೆಲೆಕೊಡಿ.

v ಅವರ ಮುಂದೆ ಅವರ ಮಕ್ಕಳನ್ನು ಬೈಯಬೇಡಿ,

v ಅವರ ಮುಂದೆ ಮೊಮ್ಮಕ್ಕಳಿಗೆ ಹೊಡೆಯಬೇಡಿ.

v ನೀವು ಎಷ್ಟೇ ದೊಡ್ಡ ಹುದ್ದೆಯಲ್ಲಿದ್ದರೂ ನಿಮ್ಮ ಗೆಳೆಯರ ಮುಂದೆ ನಿಮ್ಮ ಹಿರಿಯರನ್ನು ಗೌರವಿಸಿ, ಇಲ್ಲದಿದ್ದರೆ ಗೆಳೆಯರೂ ಕೂಡ ಗೌರವಿಸುವುದಿಲ್ಲ.

v ಅವರ ಮುಂದೆ ದ್ವನಿ ಎತ್ತರಿಸಿ ಮಾತನಾಡಬೇಡಿ.

v ಅವರ ಮುಂದೆ ಕಾಲು ಚಾಚಿ, ಕಾಲಿನ ಮೇಲೆ ಕಾಲು ಹಾಕಿ ಕುಳಿತುಕೊಳ್ಳಬೇಡಿ.

v ಅವರ ಕಡೆ ಬೆನ್ನು ಮಾಡಿ ಕೂಡ ಕುಳಿತುಕೊಳ್ಳಬೇಡಿ.

v ಅವರ ನ್ಯೂನತೆಯನ್ನು ಎತ್ತಿ ತೋರಿಸಬೇಡಿ.

v ಸಣ್ಣ-ಸಣ್ಣ ಬಳಲಿಕೆಯನ್ನು ಅವರ ಮುಂದೆ ಹೇಳಬೇಡಿ.

v ಅವರು ಪಾಲಿಸುತ್ತಾ ಬಂದಿರುವ ಸಂಪ್ರದಾಯಗಳನ್ನು ಬದಲಿಸಲು ಪ್ರಯತ್ನಿಸಬೇಡಿ.

v ನಿಮ್ಮ ಕಷ್ಟಗಳನ್ನು ತಿಳಿಸಬೇಡಿ, ಆದರೆ ಅವರಿಂದ ಸಲಹೆ ಪಡೆದುಕೊಳ್ಳಿ.

v ಅವರ ವಯಸ್ಸಿನ ಬಗ್ಗೆ ಹೀಯಾಳಿಸಬೇಡಿ.

v ಅವರು ಮಾಡಿದ ತಪ್ಪಿಗೆ ನಗಬೇಡಿ, ನೋಡಿಯೂ ನೋಡದಹಾಗೆ ಇರಿ.

v ಹೋಗುವಾಗ ಬರುವಾಗ ಭೇಟಿಯಾಗಿ ಆಶೀರ್ವಾದ ಪಡೆಯಿರಿ.

v ಅವರಿಗೆ ಇಷ್ಟವಾದ ಹೆಸರಿನಿಂದಲೇ ಕರೆಯಿರಿ.

v ಅವರ ಅನುಭವವನ್ನು ತಿಳಿದುಕೊಳ್ಳಿ ಮತ್ತು ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ.

v ದಿನಕ್ಕೆ ಕನಿಷ್ಟ 1 ಗಂಟೆಯಾದರೂ ಮಕ್ಕಳನ್ನು ಅವರ ಹತ್ತಿರ ಬಿಡಿ.

v ಅವರನ್ನು ಒಂಟಿಯಾಗಿ ಬಿಡಬೇಡಿ, ನಿಮ್ಮ ಜೊತೆ ಇರಿಸಿಕೊಳ್ಳಿ.

v ಅವರ ಪ್ರಶ್ನೆಗೆ ಸರಿಯಾದ ಉತ್ತರ ಕೊಡಿ, ಪ್ರಶ್ನೆಗೆ ಮರುಪ್ರಶ್ನೆ ಮಾಡಬೇಡಿ.

v ನಿಮ್ಮ ಕರ್ತವ್ಯ ಮರೆಯಬೇಡಿ, ಬೇರೆಯವರ ಕರ್ತವ್ಯ ಲೋಪದ ಬಗ್ಗೆ ಯೋಚಿಸಬೇಡಿ.

v ಹಿರಿಯರು ನಮಗೆ ದೇವರಿದ್ದಹಾಗೆ, ಅವರ ಅನುಭವ, ಮಾರ್ಗದರ್ಶನ, ಅವರ ಆಶೀರ್ವಾದ ನಮಗೆ ಅತ್ಯವಶ್ಯಕ.

-ಕೃಷ್ಣಾರ್ಪಣಮಸ್ತು

(ಸತ್ಸಂಗ ಸಂಗ್ರಹ)