ವೀರಾಜಪೇಟೆ, ಡಿ. 30: ಮೈಸೂರಿನಲ್ಲಿ ನಡೆದ ನ್ಯಾಷನಲ್ ಓಪನ್ ಚಾಂಪಿಯನ್ ಶಿಪ್ ಕರಾಟೆಯಲ್ಲಿ ಇಲ್ಲಿನ ಸಂತ ಅನ್ನಮ್ಮ ಶಾಲೆಯ ಆರನೇ ತರಗತಿ ವಿದ್ಯಾರ್ಥಿ ಎಂ. ಹರಿಕೃಷ್ಣನ್ ಒಂದು ಬೆಳ್ಳಿ ಹಾಗೂ ಎರಡು ಕಂಚಿನ ಪದಕ ಗಳಿಸಿದ್ದಾನೆ.

ಕರಾಟೆ ಶಿಕ್ಷಕ ಎಂ.ಬಿ. ಚಂದ್ರನ್ ತರಬೇತಿ ನೀಡಿದ್ದಾರೆ. ಹರಿಕೃಷ್ಣನ್ ಇಲ್ಲಿನ ಎ. ಮನೋಹರನ್, ಶ್ರೀದೇವಿ ದಂಪತಿಯ ಪುತ್ರ.