ಗುಡ್ಡೆಹೊಸೂರು, ಡಿ. 24: ಇಲ್ಲಿಗೆ ಸಮೀಪದ ಸುಣ್ಣದಕೆರೆ ವ್ಯಾಪ್ತಿಯ ನಿವಾಸಿ ರತ್ನಮ್ಮ ಅವರ ತೋಟಕ್ಕೆ ನುಗ್ಗಿದ ಆನೆಗಳು ಫಸಲಿಗೆ ಬಂದಿದ್ದ ಮೂರು ತೆಂಗಿನ ಮರ ಮತ್ತು ಒಂದು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಬಾಳೆ ಮತ್ತು ಪಪ್ಪಾಯಿ ಮರಗಳನ್ನು ಮುರಿದು ಅಪಾರ ಪ್ರಮಾಣದಲ್ಲಿ ನಷ್ಟಪಡಿಸಿದೆ.

ರತ್ನಮ್ಮ ಅವರ ಪುತ್ರ ರಾಜಪ್ಪ ಈ ಕುರಿತು ಅರಣ್ಯ ಇಲಾಖೆಗೆ ದೂರು ನೀಡಿದ್ದಾರೆ. ಈ ವಿಭಾಗದ ಅರಣ್ಯಧಿಕಾರಿಗಳಾದ ಅನಿಲ್‍ಡಿಸೋಜಾ ಮತ್ತು ತಂಡದವರು ಪರಿಶೀಲನೆ ನಡೆಸಿದ್ದಾರೆ. ರತ್ನಮ್ಮ ಅವರು ಬೆಳೆ ನಾಶಕ್ಕೆ ಸೂಕ್ತ ಪರಿಹಾರ ನೀಡುವಂತೆ ಇಲಾಖೆಗೆ ವಿನಂತಿಸಿಕೊಂಡಿದ್ದಾರೆ.