ಕುಶಾಲನಗರ, ನ. 19: ಕುಶಾಲನಗರ ಜಾತ್ರೋತ್ಸವ ಅಂಗವಾಗಿ ಆಯೋಜಿಸಿದ್ದ 99ನೇ ಗೋಪ್ರದರ್ಶನ ಸಮಾರೋಪ ಕಾರ್ಯಕ್ರಮ ಮಂಗಳವಾರ ನಡೆಯಿತು.
3 ದಿನಗಳ ಕಾಲ ನಡೆದ ದನಗಳ ಜಾತ್ರೆಯಲ್ಲಿ ಪಾಲ್ಗೊಂಡಿದ್ದ 150 ಕ್ಕೂ ಅಧಿಕ ರಾಸುಗಳ ಪ್ರದರ್ಶನದೊಂದಿಗೆ ಉತ್ತಮ ರಾಸುಗಳ ಆಯ್ಕೆ ಪ್ರಕ್ರಿಯೆ ನಡೆಯಿತು.
ಪ್ರದರ್ಶನದಲ್ಲಿ ಪಾಲ್ಗೊಂಡಿದ್ದ ಜಾನುವಾರುಗಳನ್ನು ಹಾಲು ಹಲ್ಲಿನ ಜೋಡಿ ಹಳ್ಳಿಕಾರ್ ಕರುಗಳು, ಎರಡು ಹಲ್ಲಿನ ಜೋಡಿ ಹಳ್ಳಿಕಾರ್ ಎತ್ತುಗಳು, ನಾಲ್ಕು ಹಲ್ಲಿನ ಜೋಡಿ ಹಳ್ಳಿಕಾರ್ ಎತ್ತುಗಳು, ಬಾಯಿ ಕೂಡಿದ ಜೋಡಿ ಹಳ್ಳಿಕಾರ್ ಎತ್ತುಗಳು, ಮಿಶ್ರತಳಿ ಬೀಜದ ಹೋರಿ, ಮಿಶ್ರತಳಿ ಜೋಡಿ ಎತ್ತುಗಳು, ಜರ್ಸಿ ಹಸುಗಳು, ಕಡಸುಗಳು, ಕರುಗಳು, ಹೆಚ್.ಎಫ್.ಹಸುಗಳು, ಕಡಸುಗಳು, ಕರುಗಳು, ಜೋಡಿ ಹಳ್ಳಿಕಾರ್ ಕಡಸುಗಳು, ಹಾಲು ಕುಡಿಯುವ ಹಳ್ಳಿಕಾರ್ ಕರುಗಳು, ಮಿಶ್ರತಳಿ ಹಸುಗಳು, ಕಡಸುಗಳು, ನಾಟಿ ಹಸು, ಕರು, ಕಡಸುಗಳ ವಿಭಾಗ ರಚಿಸಿ ಪಶುವೈದ್ಯಾಕಾರಿಗಳ ತಂಡ ಪರಿಶೀಲಿಸಿ ಆಯ್ಕೆಗೊಳಿಸಿದರು. ಸಾಕುಪ್ರಾಣಿಗಳ ಪ್ರದರ್ಶನ ಮತ್ತು ಆಯ್ಕೆ ನಡೆಯಿತು. ವಿವಿಧ ತಳಿಗಳ ನಾಯಿಗಳು, ಕುರಿ, ಟಗರು, ಮೊಲ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದವು.
ಪಶುಪಾಲನ ಇಲಾಖೆ ತಾಲೂಕು ಸಹಾಯಕ ನಿರ್ದೇಶಕ ಡಾ.ಬಾದಾಮಿ, ಪಶುವೈದ್ಯಾಕಾರಿಗಳಾದ ಚೆಟ್ಟಳ್ಳಿಯ ಡಾ.ಸಂಜೀವಕುಮಾರ್ ಶಿಂಧೆ, ಕುಶಾಲನಗರದ ಡಾ.ಶ್ರೀದೇವ್, ಜಾನುವಾರು ಅಧಿಕಾರಿ ಮತ್ತು ಪರೀಕ್ಷಕರಾದ ರಾಜ್ಕುಮಾರ್, ಸುರೇಶ್ ರಾಸುಗಳ ಆಯ್ಕೆ ಪ್ರಕ್ರಿಯೆ ನಡೆಸಿದರು.
ಸಾಕು ಪ್ರಾಣಿಗಳ ವಿಭಾಗದಲ್ಲಿ ಮುಧೋಳ್, ಜರ್ಮನ್ ಶೆಫರ್ಡ್, ಪಗ್, ರಾಟ್ವೀಲರ್, ಲಾಶಾಪ್ಸೊ ತಳಿಗಳು ಸೇರಿದಂತೆ ಸಾಮಾನ್ಯ ಜಾತಿಯ ನಾಯಿಗಳ ಪ್ರದರ್ಶನ ನೆರೆದಿದ್ದ ಜನರನ್ನು ಆಕರ್ಷಿಸಿತು.
ಜಾತ್ರೆಯಲ್ಲಿ ಶ್ವಾನಗಳಿಗೆ ಉಚಿತ ರೇಬಿಸ್ ನಿರೋಧಕ ಲಸಿಕೆಗಳನ್ನು ನೀಡಲಾಯಿತು.
ಸಂಜೆ ನಡೆದ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ವಿಜೇತ ರಾಸುಗಳು, ಸಾಕು ಪ್ರಾಣಿಗಳ ಮಾಲೀಕರಿಗೆ ದೇವಾಲಯ ಸಮಿತಿ ವತಿಯಿಂದ ಬಹುಮಾನ ವಿತರಣೆ ನಡೆಯಿತು.
ಈ ಸಂದರ್ಭ ಗಣಪತಿ ದೇವಾಲಯ ಸಮಿತಿ ಅಧ್ಯಕ್ಷ ವಿ.ಎನ್.ವಸಂತಕುಮಾರ್, ಎಸ್.ಕೆ. ಶ್ರೀನಿವಾಸರಾವ್, ಎಂ.ಕೆ.ದಿನೇಶ್, ಅಮೃತ್ರಾಜ್, ವಿ.ಡಿ.ಪುಂಡರೀಕಾಕ್ಷ, ಎಚ್.ಎನ್.ರಾಮಚಂದ್ರ, ಡಿ.ಅಪ್ಪಣ್ಣ, ವೈ.ಆರ್.ನಾಗೇಂದ್ರ, ಪ್ರಮುಖರಾದ ಕೆ.ಎನ್.ದೇವರಾಜ್, ಎಸ್.ಎನ್. ನರಸಿಂಹಮೂರ್ತಿ, ಎಂ.ವಿ. ನಾರಾಯಣ ಮತ್ತಿತರರು ಇದ್ದರು.