ಸುಂಟಿಕೊಪ್ಪ, ಸೆ.30: ಶ್ರೀವೃಕ್ಷೋದ್ಭವ ಶಕ್ತಿ ಗಣಪತಿ ದೇವಾಲಯದಲ್ಲಿ ಶರನ್ನವರಾತ್ರಿ ಉತ್ಸವ ತಾ.8 ರವರೆಗೆ ನಡೆಯಲಿದೆ.

ತಾ.1 ರಂದು (ಇಂದು) ಗಂಧದ ಅಲಂಕಾರ, ತಾ.2 ರಂದು ಬೆಣ್ಣೆ ಅಲಂಕಾರ, ತಾ.3 ರಂದು ದಾಳಿಂಬೆ ಅಲಂಕಾರ, ತಾ.4 ರಂದು ಪುಷ್ಪಾಲಂಕಾರ, ತಾ.5 ರಂದು ದ್ರಾಕ್ಷಿ ಅಲಂಕಾರ, ತಾ.6 ರಂದು ವಸ್ತ್ರಾಲಂಕಾರ, ತಾ.7 ರಂದು ವೀಳೈದೆಲೆ ಅಲಂಕಾರ, ತಾ.8ರಂದು ಅಭಿಷೇಕÀ ಮತ್ತು ನವಧಾನ್ಯ ಅಲಂಕಾರ ಪೂಜೆ ನಡೆಯಲಿದೆ.

ತಾ.1 ರಂದು (ಇಂದು) ಗಂಧದ ಅಲಂಕಾರ, ತಾ.2 ರಂದು ಬೆಣ್ಣೆ ಅಲಂಕಾರ, ತಾ.3 ರಂದು ದಾಳಿಂಬೆ ಅಲಂಕಾರ, ತಾ.4 ರಂದು ಪುಷ್ಪಾಲಂಕಾರ, ತಾ.5 ರಂದು ದ್ರಾಕ್ಷಿ ಅಲಂಕಾರ, ತಾ.6 ರಂದು ವಸ್ತ್ರಾಲಂಕಾರ, ತಾ.7 ರಂದು ವೀಳೈದೆಲೆ ಅಲಂಕಾರ, ತಾ.8ರಂದು ಅಭಿಷೇಕÀ ಮತ್ತು ನವಧಾನ್ಯ ಅಲಂಕಾರ ಪೂಜೆ ನಡೆಯಲಿದೆ.

ತಾ.29 ರಂದು ಬೆಳಿಗ್ಗೆ 8 ಗಂಟೆಗೆ ಮತ್ತು ಪ್ರತಿದಿನ ಸಂಜೆ 6 ರಿಂದ 8 ಗಂಟೆವರೆಗೆ ಅಲಂಕಾರ ವಿವಿಧ ಪೂಜೆ ಮಂಗಳಾರತಿ ಮತ್ತು ಪ್ರಸಾದ ವಿನಿಯೋಗ ಏರ್ಪಡಿಸಲಾಗಿದೆ.

ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲಾಗಿರುವ ಲಕ್ಷ್ಮೀ ಪಾರ್ವತಿ,ಸರಸ್ವತಿ ದೇವಿಗೆ ಪ್ರತಿದಿನ ವಿಶೇಷ ಅಲಂಕಾರ ಪೂಜೆ ನಡೆಸಲಾಗುವದೆಂದು ದೇವಾಲಯ ಟ್ರಸ್ಟ್‍ನ ಮಂಡಳಿ ಹಾಗೂ ಉತ್ಸವ ಸಮಿತಿ ಅಧ್ಯಕ್ಷರು ತಿಳಿಸಿದ್ದಾರೆ.