ಕೂಡಿಗೆ, ಅ. 1: ಕೂಡುಮಂಗಳೂರು ಗ್ರಾಮ ಪಂಚಾಯಿತಿ ಜಮಾಬಂದಿ ಕಾರ್ಯಕ್ರಮವು ಗ್ರಾಮ ಪಂಚಾಯತಿ ಅಧ್ಯಕ್ಷೆ ಲಕ್ಷ್ಮಿ ಅಧ್ಯಕ್ಷತೆಯಲ್ಲಿ ಗ್ರಾ.ಪಂ. ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ 2018-19ನೇ ಸಾಲಿನ ಜಮಾಬಂದಿ ಬಗ್ಗೆ ಚರ್ಚೆಯನ್ನು ಗ್ರಾಮಸ್ಥರು ನಡೆಸಿದರು. ಅ ಸಾಲಿನ ಕಾಮಗಾರಿಗಳ ಬಗ್ಗೆ ವರದಿಯನ್ನು ಪಂಚಾಯತಿ ಅಭಿವೃದ್ಧಿ ಅಧಿಕಾರಿ ಅಯಿಷಾ ಮಂಡಿಸಿದರು.

ನೋಡೆಲ್ ಅಧಿಕಾರಿ ಹೇಮಂತ್ ಕುಮಾರ್, ಭಾಗವಹಿಸಿದ್ದರು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸಣ್ಣಪ್ಪ ಸೇರಿದಂತೆ ಸರ್ವ ಸದಸ್ಯರು, ಇಂಜಿನಿಯರ್ ಕೀರ್ತನ್, ಕಾರ್ಯದರ್ಶಿ ಮಾದಪ್ಪ, ಕಂದಾಯ ವಸೂಲಿಗಾರ ಅವಿನಾಶ್, ಮತ್ತಿತರರು ಇದ್ದರು.