ಗೋಣಿಕೊಪ್ಪಲು, ಸೆ. 28: 41ನೇ ವರ್ಷದ ಗೋಣಿಕೊಪ್ಪ ದಸರಾ ಜನೋತ್ಸವಕ್ಕೆ ಶ್ರೀ ಕಾವೇರಿ ದಸರಾ ಸಮಿತಿ ಸಕಲ ಸಿದ್ದತೆ ನಡೆಸಿದ್ದು, ತಾ. 29ರಂದು (ಇಂದು) ಚಾಮುಂಡೇಶ್ವರಿ ದೇವಿ ಮೂರ್ತಿಗೆ ಪೂಜೆ ಸಲ್ಲಿಸುವದರ ಮೂಲಕ ಚಾಲನೆ ದೊರೆಯಲಿದೆ.ಶಾಸಕ ಕೆ.ಜಿ. ಬೋಪಯ್ಯ ಅವರ ಉಪಸ್ಥಿತಿಯಲ್ಲಿ ಪೆÇನ್ನಂಪೇಟೆ ಶ್ರೀ ರಾಮಕೃಷ್ಣ ಮಠದ ಸ್ವಾಮಿಜೀ ಪರಹಿತಾನಂದಾ ಮಹಾರಾಜ್ ದೇವಿಗೆ ಪುಷ್ಪಾರ್ಚನೆ ಸಲ್ಲಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಲಿದ್ದಾರೆ. ಬೆಳಿಗ್ಗೆ 7 ಗಂಟೆಗೆ ಗಣಪತಿ ಹೋಮ, 8 ಗಂಟೆಗೆ ದೇವಿ ಪ್ರತಿಷ್ಠಾಪನೆ ಕಾರ್ಯ ನಡೆಯಲಿದೆ. ರಾಜ್ಯ ಸರ್ಕಾರ ರೂ. 30 ಲಕ್ಷ ಅನುದಾನ ಬಿಡುಗಡೆ ಮಾಡಿದ್ದು,
ದಸರಾದ ಪ್ರಮುಖ ಆಕರ್ಷಣೆ ಶೋಭಾಯಾತ್ರೆಯಲ್ಲಿ ಕಾವೇರಿ ದಸರಾ ಸಮಿತಿ, ಕಾಡ್ಲಯ್ಯಪ್ಪ ದಸರಾ ಸಮಿತಿ, ಹರಿಶ್ಚಂದ್ರಪುರ ನಮ್ಮ ದಸರಾ ಸಮಿತಿ, ಶಾರದಾಂಭ ದಸರಾ ಸಮಿತಿ, ನಾಡಹಬ್ಬ ಸಮಿತಿ, ಸರ್ವರ ದಸರಾ ಸಮಿತಿ, ನವಚೇತನ ದಸರಾ ಸಮಿತಿ, ಯುವ ದಸರಾ ಸಮಿತಿ, ಕೈಕೇರಿಯ ಭಗವತಿ ಹಾಗೂ ಸ್ನೇಹಿತರ ಬಳಗ ಕೊಪ್ಪ ಸಮಿತಿಗಳು ಪಾಲ್ಗೊಳ್ಳಲಿವೆ. ದಶಮಂಟಪಗಳ
(ಮೊದಲ ಪುಟದಿಂದ) ಶೋಭಯಾತ್ರೆಯಲ್ಲಿ ಉತ್ಸವ ಸಮಿತಿಯಿಂದ ಹೊರತರ ಲಾಗುವ ಕಲಾಕೃತಿ ಎಲ್ಲರಿಗಿಂತಲೂ ವಿಭಿನ್ನವಾಗಿರಬೇಕೆಂಬ ಬಯಕೆ, ತುಡಿತ ಸಮಿತಿಗಳದ್ದಾಗಿದ್ದು, ಇದಕ್ಕಾಗಿ ರಾತ್ರಿ ಹಗಲೆನ್ನದೆ ಎಲ್ಲಾ ಸಮಿತಿಗಳು ಕಾರ್ಯ ನಿರ್ವಹಿಸುತ್ತಿವೆ.
ಸ್ತಬ್ದ ಚಿತ್ರ : ಅ. 7 ರಂದು ಮಧ್ಯಾಹ್ನ ನಡೆಯುವ ಸ್ತಬ್ದಚಿತ್ರ ಮೆರವಣಿಗೆ ದಸರಾದ ಆಕರ್ಷಣೆಯಲ್ಲೊಂದಾಗಿದ್ದು, ವಿಭಿನ್ನ ಕಲಾಕೃತಿಗಳು ಪ್ರದರ್ಶನಗೊಳ್ಳುವ ನಿರೀಕ್ಷೆ ನಾಡಹಬ್ಬ ಸಮಿತಿಗಳದ್ದಾಗಿದೆ.
ದಸರಾ ಉತ್ಸವವನ್ನು ಅರ್ಥಪೂರ್ಣವಾಗಿ ಹಾಗೂ ಯಶಸ್ವಿಯಾಗಿ ನಡೆಸಲು ಈಗಾಗಲೇ ತಯಾರಿ ನಡೆದಿದೆ ಎಂದು ಕಾವೇರಿ ದಸರಾ ಸಮಿತಿಯ ಕಾರ್ಯಾಧ್ಯಕ್ಷ ಕೆ.ಪಿ. ಬೋಪಣ್ಣ, ಅಧ್ಯಕ್ಷ ಕೆ.ಜಿ. ರಾಮಕೃಷ್ಣ, ಕಾರ್ಯದರ್ಶಿ ಜಿಮ್ಮಿ ಸುಬ್ಬಯ್ಯ ತಿಳಿಸಿದ್ದಾರೆ. -ಚಿತ್ರ ವರದಿ : ಎನ್.ಎನ್ ದಿನೇಶ್