ಚೆಟ್ಟಳ್ಳಿ, ಆ. 18: ನಾಪೋಕ್ಲು ಹಾಗೂ ಕೊಂಡಂಗೇರಿಯ ನೆರೆ ಸಂತ್ರಸ್ತ ಕುಟುಂಬಗಳ ವಿದ್ಯಾರ್ಥಿಗಳಿಗೆ ಕುಶಾಲನಗರದ ದಿನೇಶ್ ನಾವೆಲ್ಟೀಸ್‍ನ ಮಾಲೀಕ ಜಿತೇಶ್ ಪುರಿಯವರು ನೋಟ್‍ಬುಕ್, ಬ್ಯಾಗ್ ಹಾಗೂ ವಿದ್ಯಾಭ್ಯಾಸಕ್ಕೆ ಸಂಬಂಧಿಸಿದ ವಸ್ತುಗಳನ್ನು ಉಚಿತವಾಗಿ ವಿತರಿಸಿದರು.