ಗೋಣಿಕೊಪ್ಪ ವರದಿ, ಆ. 13: ತಾ. 15 ರಂದು ನಡೆಯಲಿರುವ ಸ್ವಾತಂತ್ರ್ಯೋತ್ಸವದಂದು ಮಾಯಮುಡಿ ಗ್ರಾಮದ ಮುಖ್ಯರಸ್ತೆಯ ಬದಿಗಳಲ್ಲಿರುವ ಮನೆಗಳಲ್ಲಿ ಧ್ವಜಾರೋಹಣ ನಡೆಸುವ ಮೂಲಕ ವಿಶೇಷ ರೀತಿಯಲ್ಲಿ ಆಚರಿಸಲಾಗುತ್ತಿದೆ.
ಅಲ್ಲಿನ ಮಾನಿಲ್ ಅಯ್ಯಪ್ಪ ಸೇವಾ ಸಮಿತಿ, ಮಾನಿಲ್ ಅಯ್ಯಪ್ಪ ಯುವಕ ಸಂಘ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಿದ್ದು, ಮನೆಗಳಲ್ಲಿ ಹೆಚ್ಚು ಧ್ವಜಾರೋಹಣ ಹಾರಿಸಲಾಗುತ್ತಿದೆ. ನಂತರ, ಸಂಘದ ಆವರಣದಲ್ಲಿ ದ್ವಜಾರೋಹಣ, ರಕ್ಷಾಬಂಧನ, ಸ್ವಚ್ಛ ಭಾರತ್ ಕಾರ್ಯಕ್ರಮ ನಡೆಯಲಿದೆ. ಕಾಫಿ ಬೆಳೆಗಾರರಾದ ಕೊಡಂದೇರ ಎಂ. ತಿಮ್ಮಯ್ಯ ಅವರಿಂದ ಧ್ವಜಾರೋಹಣ, ತೀತರಮಾಡ ಪಿ. ಜಗದೀಶ್ ಅವರಿಂದ ರಕ್ಷಾಬಂಧನ ವಿತರಣೆ, ಕಾಳಪಂಡ ಟಿಪ್ಪು ಬಿದ್ದಪ್ಪ ಅವರು ಸ್ವಚ್ಛ ಭಾರತ್ ಶ್ರಮದಾನ ಉದ್ಘಾಟಿಸಲಿದ್ದಾರೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.