ಮಡಿಕೇರಿ, ಆ. 13: ಕೊಡಗು ರೆಡ್ಕ್ರಾಸ್ ಘಟಕದ ವತಿಯಿಂದ ಮಳೆಗಾಲ ಹಿನ್ನಲೆಯಲ್ಲಿ ನಗರದ ಶಿಶು ಕಲ್ಯಾಣ ಸಂಸ್ಥೆಯ ಮಕ್ಕಳಿಗೆ ಬೆಚ್ಚನೆಯ ಉಡುಪುಗಳನ್ನು ನೀಡಲಾಯಿತು. ರೆಡ್ಕ್ರಾಸ್ ವತಿಯಿಂದ ನಗರದ ಶಿಶುಕಲ್ಯಾಣ ಸಂಸ್ಥೆಯ 25 ಮಕ್ಕಳಿಗೆ ಮಳೆಗಾಲಕ್ಕಾಗಿ ಬೆಚ್ಚನೆಯ ಉಡುಪುಗಳು, ಜಮಖಾನ, ಹೊದಿಕೆ, ಟವಲ್, ನಿತ್ಯೋಪಯೋಗಿ ವಸ್ತುಗಳನ್ನು ನೀಡಲಾಯಿತು. ರೆಡ್ಕ್ರಾಸ್ ಸಂಸ್ಥೆಯ ಕೊಡಗು ಘಟಕದ ಸಭಾಧ್ಯಕ್ಷ ಬಿ.ಕೆ. ರವೀಂದ್ರರೈ, ಕಾರ್ಯದರ್ಶಿ ಎಚ್.ಆರ್. ಮುರಳೀಧರ್, ನಿರ್ದೇಶಕರುಗಳಾದ ಕೆ.ಡಿ. ದಯಾನಂದ್, ಎಂ. ಧನಂಜಯ್, ಪ್ರಸಾದ್ಗೌಡ, ಕೊಡಗು ಶಿಶುಕಲ್ಯಾಣ ಸಂಸ್ಥೆಯ ಅಧ್ಯಕ್ಷ ಕೆ. ಮೋಹನ್ ಮೊಣ್ಣಪ್ಪ, ಶಶಿಮೊಣ್ಣಪ್ಪ, ಶಿಲ್ಪರವೀಂದ್ರರೈ ಹಾಜರಿದ್ದರು.