ಮಡಿಕೇರಿ, ಆ. 13: ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಮತ್ತು ಕೊಡಗು ಪ್ರಕೃತಿ ವಿಕೋಪ ನಿರ್ವಹಣೆ ಮೇಲುಸ್ತುವಾರಿ ಅಧಿಕಾರಿ ರಾಜ್ ಕುಮಾರ್ ಖತ್ರಿ ಅವರು ಜಿಲ್ಲೆಗೆ ಭೇಟಿ ನೀಡಿ ಮಳೆ ಹಾನಿಯಿಂದ ಉಂಟಾದ ಸಮಸ್ಯೆಗಳ ಕುರಿತು ಮಾಹಿತಿ ಪಡೆದರು.
ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಮಳೆ ಹಾನಿಯಿಂದ ಆಗಿರುವ ಹಾನಿ, ಜನರ ರಕ್ಷಣೆ ಹಾಗೂ ಪರಿಹಾರ ಕೇಂದ್ರಗಳ ಮಾಹಿತಿ ನೀಡಿದರು. ಮಳೆ ಹಾನಿ ಯಿಂದಾಗಿ ಜಿಲ್ಲೆಯಲ್ಲಿ 9 ಜನರು ಸಾವನಪ್ಪಿದ್ದು, 8 ಜನರು ಕಣ್ಮರೆಯಾಗಿದ್ದಾರೆ. ಪರಿಹಾರ ಕಾರ್ಯಗಳು ಸಮೋರೋಪಾದಿಯಲ್ಲಿ ನಡೆಯುತ್ತಿರುವದಾಗಿ ಅವರು ಮಾಹಿತಿ ನೀಡಿದರು. ಅಂದಾಜು 1,900 ಕುಟುಂಬಗಳು ಮಳೆ ಹಾನಿಯಿಂದ ತೊಂದರೆಗೊಳಗಾಗಿದು,್ದ ವೀರಾಜಪೇಟೆ ತಾಲೂಕಿನಲ್ಲಿ ಹೆಚ್ಚು ಹಾನಿ ಸಂಭವಿಸಿದ್ದು ಈ ಸಂಬಂಧ ತೆಗೆದುಕೊಂಡಿರುವ ತುರ್ತು ಕಾರ್ಯಗಳು ಹಾಗೂ ಪರಿಹಾರ ಕಾರ್ಯಗಳ ಮಾಹಿತಿಯನ್ನು ಜಿಲ್ಲಾಧಿಕಾರಿಯವರು ನೀಡಿದರು.
ಪ್ರೋ. ಐಎಎಸ್ ಹಾಗೂ ಕೆಎಎಸ್ ಅಧಿಕಾರಿಗಳನ್ನು ಪರಿಹಾರ ಕಾರ್ಯಗಳಲ್ಲಿ ನಿಯೋಜಿಸಿ ಕೊಂಡಿರುವ ಬಗ್ಗೆ ವಿವರಣೆ ನೀಡಿದರು. ಜಿಲ್ಲೆಯಲ್ಲಿ ಮಳೆ ಹಾನಿಯಿಂದ ಎಲ್ಲಾ ರೀತಿಯಲ್ಲೂ ಹೆಚ್ಚು ಹಾನಿ ಸಂಭವಿಸಿರುವದಾಗಿ ಈ ಸಂಬಂಧ ನಷ್ಟದ ಅಂದಾಜು ಪಟ್ಟಿ ನೀಡುತ್ತಿರುವ ಬಗ್ಗೆ ಮಾಹಿತಿ ನೀಡಿದರು. ಜಿ.ಪಂ. ಸಿಇಓ ಕೆ. ಲಕ್ಷ್ಮೀಪ್ರಿಯಾ ಮಾತನಾಡಿ, ಪರಿಹಾರ ಕೇಂದ್ರಗಳ ನಿರ್ವಾಹಣೆಗೆ ಅಗತ್ಯ ದಾಸ್ತನುಗಳಿದ್ದು ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ 24 ಗಂಟೆಗಳ ಕಂಟ್ರೋಲ್ ರೂಮ್ ತೆರೆಯಲಾಗಿದ್ದು, ಪರಿಹಾರ ಕೇಂದ್ರ ಗಳಲ್ಲಿ ವೈದ್ಯರು ಕಾರ್ಯ ನಿರ್ವಹಿಸುತ್ತಿದ್ದು ಆರೋಗ್ಯಕ್ಕೆ ಸಂಬಂಧಿಸಿದ ತರಬೇತಿ ನೀಡಲಾ ಗುತ್ತಿದೆ ಎಂದು ಮಾಹಿತಿ ನೀಡಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪಿ. ಅವರು ರಕ್ಷಣಾ ಕಾರ್ಯಗಳು ಹಾಗೂ ಕಾಣೆಯಾದವರ ಶೋಧ ಕಾರ್ಯದ ಬಗ್ಗೆ ಮಾಹಿತಿ ನೀಡಿದರು. ಅಧಿಕಾರಿಗಳಿಂದ ಮಾಹಿತಿ ಪಡೆದು ಮಾತನಾಡಿದ ರಾಜ್ಕುಮಾರ್ ಖತ್ರಿ ಅವರು ತುರ್ತಾಗಿ ಆಗಬೇಕಾದ ಕೆಲಸ ಗಳ ಹಾಗೂ ಮುಂದೆ ಮಾಡಬೇಕಾದ ಪರಿಹಾರ ಕೆಲಸಗಳ ಕುರಿತು ಮಾರ್ಗ ದರ್ಶನ ನೀಡಿ ಸರ್ಕಾರವು ಸಂತ್ರಸ್ತ ಕುಟುಂಬಗಳಿಗೆ ಆಸ್ತಿ, ಮನೆ, ಬೆಳೆ ಕಳೆದುಕೊಂಡ ಜನರಿಗೆ ಅಗತ್ಯ ನೆರವು ನೀಡಲಿದ್ದು ಜನರು ಯಾವದೇ ರೀತಿಯ ಆತಂಕಕ್ಕೆ ಒಳಗಾಗದಂತೆ ನೋಡಿಕೊಳ್ಳುವದು ಅಧಿಕಾರಿಗಳ ಜವಾಬ್ದಾರಿಯಾಗಿದೆ. ಆ ನಿಟ್ಟಿನಲ್ಲಿ ಕಾರ್ಯನಿರ್ವಹಿಸಿಬೇಕು ಎಂದರು.