ಗೋಣಿಕೊಪ್ಪ ವರದಿ, ಆ. 10: ದೇವನೂರು ಕಿರು ಆಣೆಕಟ್ಟು ಒಡೆದು ಹೋಗಿರುವದರಿಂದ ಪ್ರವಾಹ ಎದುರಾಗಿದೆ ಸುತ್ತಲಿನ ಸಾವಿರಾರು ಎಕರೆ ತೋಟ, ಗದ್ದೆ ಜಲಾವೃತ ಗೊಂಡಿವೆÉ. ದೇವನೂರು, ರಾಜಾಪುರ, ಬಾಳೆಲೆ ವ್ಯಾಪ್ತಿಯ ಕೃಷಿಕರಿಗೆ ನಷ್ಟ ಉಂಟಾಗಿದೆ.
ಗೋಣಿಕೊಪ್ಪ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 206, ಪ್ರೌಢಶಾಲೆ ಕೇಂದ್ರದಲ್ಲಿ 66, ಒಟ್ಟು 272 ಸಂತ್ರಸ್ತರು ಇದ್ದಾರೆ. ಸ್ಥಳೀಯ ಗ್ರಾಮ ಪಂಚಾಯಿತಿ ವತಿಯಿಂದ ಆಹಾರ ಪದಾರ್ಥ ಪೂರೈಕೆಯಾಗು ತ್ತಿದೆ. ಪೊನ್ನಂಪೇಟೆ ಶಿವಕಾಲನಿ, ತೊರೆಬೀದಿ, ನಿಸರ್ಗ ನಗರ ವ್ಯಾಪ್ತಿಯಲ್ಲಿ ಆಶ್ರಯ ಕಳೆದುಕೊಂಡಿ ರುವ 21 ಸಂತ್ರಸ್ತರಿಗೆ ಅಲ್ಲಿನ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಆಶ್ರಯ ನೀಡಲಾಗಿದೆ.
ಮಾಯಮುಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾನಿಲ್ ಅಯ್ಯಪ್ಪ ದೇವರ ಕಾಡಿನಲ್ಲಿರುವ ಸರ್ಕಾರಿ ಶಾಲೆಯಲ್ಲಿ 15 ಜನರಿಗೆ ಆಶ್ರಯ ನೀಡಲಾಗಿದೆ. ಅಲ್ಲಿಗೆ ಆಹಾರ ಧಾನ್ಯಗಳ ಅವಶ್ಯಕತೆ ಇದೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಪಂಕಜ ಮಾಹಿತಿ ನೀಡಿದ್ದಾರೆ. ಕಳತ್ಮಾಡ್ ಸರ್ಕಾರಿ ಪ್ರೌಢಶಾಲೆಯಲ್ಲಿ ಕಳತ್ಮಾಡ್, ಭೀಮನಕಲ್ಲು ಪೈಸಾರಿಯ 45 ನಿರಾಶ್ರಿತರಿಗೆ ಆಶ್ರಯ ನೀಡಲಾಗಿದೆ. ಗೋಣಿಕೊಪ್ಪ ಕಾವೇರಿ ಕಾಲೇಜು ಎನ್ಎಸ್ಎಸ್ ಸೇವಕರು ಪರಿಹಾರ ಕೇಂದ್ರದಲ್ಲಿ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ.
ಖಾಸಗಿ ಬಸ್ ಸಂಚಾರ ದಕ್ಷಿಣ ಕೊಡಗಿನಲ್ಲಿ ಸಂಪೂರ್ಣ ಸ್ಥಗಿತ ಗೊಂಡಿದೆ. ಮೈಸೂರು, ಬೆಂಗಳೂರಿಗೆ ತೆರಳುವ ಸರ್ಕಾರಿ ಬಸ್ಗಳು ಕೆಲವೊಂದು ಸಂಚರಿಸುತ್ತಿವೆ. ಗೋಣಿಕೊಪ್ಪ ಪಟ್ಟಣಕ್ಕೆ ಶನಿವಾರ ವಿದ್ಯುತ್ ಸೇವೆ ನೀಡಲಾಯಿತು. -ಸುದ್ದಿಪುತ್ರ.